ಬೆಂಗಳೂರು: ಕ್ರಿಶ್ಚಿಯನ್ನರಲ್ಲದ ವಿದ್ಯಾರ್ಥಿಗಳಿಗೂ ಬೈಬಲ್ ತರಗತಿಗಳನ್ನು ಕಡ್ಡಾಯಗೊಳಿಸಿದ ಬೆಂಗಳೂರಿನ ಕ್ರಿಶ್ಚಿಯನ್ ಶಾಲೆಯೊಂದರ ವಿರುದ್ಧ ಕರ್ನಾಟಕದ ಹಿಂದೂ ಸಂಘಟನೆಗಳು ಸಿಡಿದೆದ್ದಿವೆ.
ಶತಮಾನಕ್ಕೂ ಹೆಚ್ಚು ಹಳೆಯದಾದ ಕ್ಲಾರೆನ್ಸ್ ಹೈಸ್ಕೂಲ್, ಕ್ರೈಸ್ತರಲ್ಲದವರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಬೈಬಲ್ ಪಾಠಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ನಿರ್ದೇಶಿಸಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಅವರು ಹಂಚಿಕೊಂಡ ವಿವರಗಳ ಪ್ರಕಾರ, ಈ ಶಿಕ್ಷಣ ಸಂಸ್ಥೆಯು ತಮ್ಮ ಮಗು ಬೈಬಲ್ ತರಗತಿಗಳಿಗೆ ಹಾಜರಾಗುತ್ತದೆ ಎಂದು ಒಪ್ಪಿಕೊಳ್ಳುವ ಘೋಷಣೆಗೆ ಸಹಿ ಹಾಕುವಂತೆ ಪೋಷಕರನ್ನು ಒತ್ತಾಯಿಸಿದೆ.
“ನಿಮ್ಮ ಮಗು ತನ್ನ ನೈತಿಕ ಮತ್ತು ಆಧ್ಯಾತ್ಮಿಕ ಕಲ್ಯಾಣಕ್ಕಾಗಿ ಬೆಳಿಗ್ಗೆ ಅಸೆಂಬ್ಲಿ, ಸ್ಕ್ರಿಪ್ಚರ್ ಕ್ಲಾಸ್ ಮತ್ತು ಕ್ಲಬ್ಗಳು ಸೇರಿದಂತೆ ಎಲ್ಲಾ ತರಗತಿಗಳಿಗೆ ಹಾಜರಾಗುತ್ತದೆ ಎಂದು ನೀವು ದೃಢೀಕರಿಸುತ್ತೀರಿ ಮತ್ತು ಬೈಬಲ್ ಅನ್ನು ಒಯ್ಯುವುದನ್ನು ಮತ್ತು ಕ್ಲಾರೆನ್ಸ್ ಹೈಸ್ಕೂಲ್ನಲ್ಲಿ ಅವನು/ಅವ/ಲು ತಂಗಿದ್ದಾಗ ಬೈಬಲ್ ಪಠಣವನ್ನು ವಿರೋಧಿಸುವುದಿಲ್ಲ” ಎಂಬ ಘೋಷಣೆಗೆ ಪೋಷಕರು ಸಹಿ ಮಾಡುವಂತೆ ಸೂಚಿಸಿದೆ.
ಇದಕ್ಕೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದರೆ ಮಾತ್ರ ಶಾಲೆಗೆ ದಾಖಲಾತಿಯನ್ನು ನೀಡುವುದಾಗಿ ಶಾಲಾ ಮಂಡಳಿ ಹೇಳಿದೆ ಎನ್ನಲಾಗಿದೆ.
“ಇದು ಬೇರೊಬ್ಬರ ನಂಬಿಕೆಯನ್ನು ಅನುಸರಿಸಲು ಒತ್ತಾಯಪಡಿಸುವುದರ ಹೊರತು ಬೇರೇನೂ ಅಲ್ಲ, ಇದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತದೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಭಾರತೀಯ ಸಂವಿಧಾನದ 25 ನೇ ವಿಧಿಯ ದುರ್ಬಳಕೆಯಾಗಿದೆ. ಇದು ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾಯ್ದೆಯನ್ನೂ ಉಲ್ಲಂಘಿಸುತ್ತದೆ. ” ಎಂದು ಮೋಹನ್ ಗೌಡ ಹೇಳಿದ್ದಾರೆ.
ಕ್ಲಾರೆನ್ಸ್ ಹೈಸ್ಕೂಲ್ನ ಪ್ರಾಂಶುಪಾಲ ಜೆರ್ರಿ ಜಾರ್ಜ್ ಮ್ಯಾಥ್ಯೂ ಅವರು ಕಾನೂನು ಅಭಿಪ್ರಾಯವನ್ನು ಪಡೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
“ನಮ್ಮ ಶಾಲೆಯ ಒಂದು ನೀತಿಯ ಬಗ್ಗೆ ಕೆಲವರು ಅಸಮಾಧಾನ ಹೊಂದಿದ್ದಾರೆಂದು ನಮಗೆ ತಿಳಿದಿದೆ. ನಮ್ಮದು ಶಾಂತಿ-ಪ್ರೀತಿಯ ಮತ್ತು ಕಾನೂನು ಪಾಲಿಸುವ ಶಾಲೆಯಾಗಿದೆ. ಈ ವಿಷಯದಲ್ಲಿ ನಾವು ನಮ್ಮ ವಕೀಲರನ್ನು ಸಂಪರ್ಕಿಸಿದ್ದೇವೆ ಮತ್ತು ಅವರ ಸಲಹೆಯನ್ನು ನಾವು ಅನುಸರಿಸುತ್ತೇವೆ.ದೇಶದ ಕಾನೂನನ್ನು ಮುರಿಯಯುವುದಿಲ್” ಎಂದಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಅನುಸರಿಸಲು ಜನರನ್ನು ಒತ್ತಾಯಿಸಲು ಸಾಧ್ಯವಿಲ್ಲ ಮತ್ತು ಸಂಸ್ಥೆಗಳು ಹಾಗೆ ಮಾಡುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.