ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯ ಬಗ್ಗೆ ಆಕ್ರೋಶ ಹೊರಹಾಕಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿರುವುದು ದುರಾದೃಷ್ಟಕರ ಎಂದು ಬೇಸರ ಹೊರ ಹಾಕಿದ್ದಾರೆ.
“ಬಿಜೆಪಿ ಸರ್ಕಾರ ಬಂದ ಮೇಲೂ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಈ ರೀತಿಯಾಗುತ್ತಿದೆಯಲ್ಲಾ ಎಂದು ನನಗೆ ನಾಚಿಗೆಯಾಗುತ್ತಿದೆ. ಬಂಟ್ವಾಳದಲ್ಲಿ ಪ್ರಶಾಂತ್ ಪೂಜಾರಿ, ಸುರತ್ಕಲ್ನಲ್ಲಿ ದೀಪಕ್ ರಾವ್ ಹತ್ಯೆಯಾಯಿತು. ಬೆಂಗಳೂರಿನಲ್ಲಿ ಸಂತೋಷ್ ಹತ್ಯೆಯಾಯಿತು. ರಾಜು, ಶರತ್ ಮಡಿವಾಳ ಮುಂತಾದವರ ಹತ್ಯೆಯಾಯಿತು. ಇದೀಗ ಹರ್ಷ ಅವರ ಹತ್ಯೆಯಾಗಿದೆ. ಕಗ್ಗೊಲೆಯಾದ ಕೂಡಲೇ ನಾವು ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದರೆ ನಮ್ಮ ಕಾರ್ಯಕರ್ತರು ನಂಬುತ್ತಾರಾ? ಅದಕ್ಕಾಗಿ ನನಗೆ ನಾಚಿಗೆಯಾಗುತ್ತಿದೆ” ಎಂದಿದ್ದಾರೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಘಟನೆ ಸಂಭವಿಸಿದಾಗ ಪಿಎಫ್ಐ ವಿರುದ್ಧ ಕ್ರಮಕೈಗೊಂಡು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಒಳಪಡಿಸಿದ್ದರೆ ಇಂದು ಇಂತಹ ಕೃತ್ಯಗಳು ನಡೆಯುತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೂ ಕಾಂಗ್ರೆಸ್, ಎಸ್ಡಿಪಿಐ ಅನ್ನು ಆರೋಪಿಸುವುದಾದರೆ ನಮ್ಮ ಕಾರ್ಯಕರ್ತರು ಕಷ್ಟಪಟ್ಟು ನಮಗ್ಯಾಕೆ ಸರ್ಕಾರ ಕೊಟ್ಟರು. ಬ್ಯಾನರ್, ಬಟ್ಟಿಂಗ್ ಕಟ್ಟಿ ನಮ್ಮ ಪರವಾಗಿ ಯಾಕೆ ಪ್ರಚಾರ ಮಾಡಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ನನಗೆ ವಿಶ್ವಾಸವಿದೆ. ಪಿಎಫ್ಐ, ಕೆಎಫ್ಡಿ ಕೇರಳ ಮಾದರಿಯ ಹತ್ಯೆಯನ್ನು ಕರ್ನಾಟಕಕ್ಕೆ ತರುತ್ತಿದೆ. ಈ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳುಹಿಸಬೇಕು. ನಾಲ್ಕು ಜನರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಅಂದರೆ ಸಾಲದ. ಹೈದರಾಬಾದಿನಲ್ಲಿ ಅತ್ಯಾಚಾರ ಆದಾಗ ಹೇಗೆ ಎನ್ಕೌಂಟರ್ ಮಾಡಿದ್ರೋ ಅದೇ ರೀತಿ ಕರ್ನಾಟಕದಲ್ಲಿ ಮಾಡಿದ್ರೆ ಇಂತವರು ಪಾಠ ಕಲಿತಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.