ಶಿವಮೊಗ್ಗ: ಪ್ರತೀ ವರ್ಷದಂತೆ ಈ ಬಾರಿಯೂ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಸಂಸ್ಥೆ ಕವಿಕಂಡ ಯುಗಾದಿ ಎಂಬ ಶೀರ್ಷಿಕೆ ಅಡಿ ಯುಗಾದಿ ಕವನಸಂಕಲನವನ್ನು ಹೊರತರಲಿದೆ. ಈ ಕಾರ್ಯವನ್ನು ಸತತ 12 ವರ್ಷದಿಂದ ಮಾಡುತ್ತಾ ಬರುತ್ತಿದೆ.
ಆಸಕ್ತರು ಯುಗಾದಿ, ಹೊಸ ವರುಷ, ಅಥವಾ ವಸಂತ ಇದಕ್ಕೆ ಸಂಬಂಧಿಸಿದ ತಮ್ಮ ಸ್ವರಚಿತ ಕವನಗಳನ್ನು ಕಳುಹಿಸುವಂತೆ ಅಥವಾ ಅಂದವಾಗಿ ಬರವಣಿಗೆಯಲ್ಲಿ ಬರೆದು ಫೋಟೋ ತೆಗೆದು 9449967914 ಮೊಬೈಲ್ ನಂಬರ್ ಗೆ ವಾಟ್ಸಪ್ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.
ಕವನದ ಶೀರ್ಷಿಕೆ, ಕವಿಯ ಹೆಸರು ಹಾಗೂ ಸಂಪೂರ್ಣ ಅಂಚೆ ವಿಳಾಸವನ್ನು ಕವನದ ಕೆಳಗೆ ನಮೂದಿಸಿ ಕಳುಹಿಸಬೇಕು. ಫೆ.28 ಕವನ ಕಳುಹಿಸಲು ಕಡೆಯ ದಿನಾಂಕವಾಗಿದೆ.
Email : sahachetana@gmail.comಗೆ ಕವನ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 9449967914 ಗೆ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.