ಬೆಂಗಳೂರು: ಎಂಎಂ ಹಿಲ್ಸ್ ನಲ್ಲಿ ಕರ್ನಾಟಕ ಶೀಘ್ರದಲ್ಲೇ ಆರನೇ ಹುಲಿ ಸಂರಕ್ಷಿತಾರಣ್ಯವನ್ನು ಪಡೆಯಲಿದೆ. ಈ ಸಂಬಂಧ ಕೇಂದ್ರ ಸಮ್ಮತಿಯನ್ನು ಸೂಚಿಸಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಬಂಡೀಪುರದಲ್ಲಿ, ಭಾನುವಾರ ನಾಗರಹೊಳೆಯಲ್ಲಿ ಹುಲಿ ಗಣತಿ ಆರಂಭವಾಗಿದೆ. ಜನವರಿ 27ರಂದು ಬಿಆರ್ಟಿಯಲ್ಲಿ ಹುಲಿ ಗಣತಿ ಆರಂಭವಾಗಲಿದೆ. ಹುಲಿ ಗಣತಿಯ ಹಿನ್ನೆಲೆಯಲ್ಲಿ ಜನವರಿ 23 ಮತ್ತು 25 ಮತ್ತು ಜನವರಿ 27 ಮತ್ತು ಫೆಬ್ರವರಿ 1ರಂದು ಈ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಯ ಸಫಾರಿಯನ್ನು ರದ್ದುಪಡಿಸಲಾಗಿದೆ.
ಮಾನಿಟರಿಂಗ್ ಸಿಸ್ಟಂ ಫಾರ್ ಟೈಗರ್ಸ್: ಇಂಟೆನ್ಸಿವ್ ಪ್ರೋಟೆಕ್ಷನ್ ಆಂಡ್ ಎಕಲಾಜಿಕಲ್ ಸ್ಟೇಟಸ್ ಅಪ್ಲಿಕೇಶನ್ ಮೂಲಕ ನಾಗರಹೊಳೆಯಲ್ಲಿ ಐದನೇ ಹುಲಿ ಗಣತಿ ಆಯೋಜಿಸಲಾಗಿದೆ. ಎರಡು ಹಂತಗಳಲ್ಲಿ ಹುಲಿ ಗಣತಿ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಸ್ವಯಂಸೇವಕರು ಗಣತಿ ಆಯೋಜನೆಗೆ ಸಹಾಯ ಮಾಡುತ್ತಿಲ್ಲ. ಆದರೆ 300 ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯವನ್ನು ನಡೆಸಲಿದ್ದಾರೆ.
ಈ ಗಣತಿಯು ಆನೆ ಸೇರಿದಂತೆ ಇತರ ಪ್ರಾಣಿಗಳ ದತ್ತಾಂಶವನ್ನು ಕೂಡ ಸಂಗ್ರಹ ಮಾಡಲಿದೆ. ಗಣತಿ ಮಾಡುವವರಿಗೆ ಡಿಜಿಟಲ್ ಪರಿಕರಗಳು ಮತ್ತು ಜಿಪಿಎಸ್ ಡಿವೈಸ್ ಸೇರಿದಂತೆ ಇತರ ಆಧುನಿಕ ತಂತ್ರಜ್ಞಾನಗಳನ್ನು ಒದಗಿಸಲಾಗಿದೆ. ವೈಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ತಜ್ಞರಿಂದ ತರಬೇತಿ ಪಡೆದ ಸಿಬ್ಬಂದಿ ಗಳು ಈ ಗಣತಿಯನ್ನು ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.