ನವದೆಹಲಿ: ಇಂದು ಮುಂಜಾನೆ ತೆಲಂಗಾಣ-ಛತ್ತೀಸ್ಗಢ ಗಡಿಯಲ್ಲಿನ ಮುಲುಗು ಜಿಲ್ಲೆಯ ಕುರ್ರಿಗುಟ್ಟದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಕನಿಷ್ಠ ನಾಲ್ವರು ನಕ್ಸಲರು ಹತರಾಗಿದ್ದಾರೆ. ಮೃತ ನಕ್ಸಲೀಯರ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್ಗೆ ರವಾನಿಸಲಾಗಿದೆ.
“ತೆಲಂಗಾಣ-ಛತ್ತೀಸ್ಗಢದ ಗಡಿ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದ್ದು, ಭದ್ರತಾ ಪಡೆಗಳಿಂದ 4 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಮತ್ತು ಗುಂಡಿನ ವಿನಿಮಯದಲ್ಲಿ ಗ್ರೇಹೌಂಡ್ಸ್ ಯೋಧ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ವಾರಂಗಲ್ಗೆ ವಿಮಾನದಲ್ಲಿ ರವಾನಿಸಲಾಗಿದೆ. ಶೋಧ ಕಾರ್ಯ ನಡೆಯುತ್ತಿದೆ” ಎಂದು ಐಜಿ ಬಸ್ತಾರ್ (ಛತ್ತೀಸ್ಗಢ) ಪಿ ಸುಂದರರಾಜ್ ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಒಂದು ಎಸ್ಎಲ್ಆರ್ ಎಲ್ಎಂಜಿ, ಒಂದು ಎಕೆ-47 ಜೊತೆಗೆ ಬಯೋನೆಟ್, ಒಂದು ಎಸ್ಎಲ್ಆರ್, ಡಬಲ್ ಬ್ಯಾರೆಲ್ ಗನ್, ಶಸ್ತ್ರಾಸ್ತ್ರಗಳ ಎಸ್ಎಲ್ಆರ್ ಎಲ್ಎಂಜಿ- 03, ಎಕೆ-47- 03 28 ರೌಂಡ್ಗಳು, ಎಸ್ಎಲ್ಆರ್ -02 24 ರೌಂಡ್ಗಳು ಮತ್ತು ಸ್ಫೋಟಕ ವಸ್ತುಗಳನ್ನು ನಕ್ಸಲರಿಂದ ವಶಪಡಿಸಿಕೊಂಡಿದ್ದಾರೆ.
An encounter took place in border area of Telengana-Chhattisgarh, 4 naxals gunned down by security forces & a Greyhounds jawan injured in exchange of fire. The jawan has been airlifted to Warangal for treatment. Search op underway: IG Bastar (Chhattisgarh) P Sundarraj
(File pic) pic.twitter.com/eOWJn9jqmY
— ANI (@ANI) January 18, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.