ಗಂಗ್ಟೋಕ್: ಭಾರತೀಯ ಯೋಧರು ಶೌರ್ಯ ಮತ್ತು ಸಾಹಸಕ್ಕೆ ಹೆಸರಾದವರು. ಎಂತಹುದೇ ಪರಿಸ್ಥಿತಿಯಲ್ಲೂ ಎಂತಹ ಕಠಿಣ ಸವಾಲನ್ನು ಕೂಡ ಲೀಲಾಜಾಲವಾಗಿ ಎದುರಿಸಿ ಗೆಲುವನ್ನು ತಮ್ಮದಾಗಿಸಿಕೊಳ್ಳುವಲ್ಲಿ ನಿಸ್ಸೀಮರು. ಕಠಿಣ ಭೂಪ್ರದೇಶದಲ್ಲಿ ದೇಶಸೇವೆಗಾಗಿ ನಿಯೋಜನೆಗೊಂಡಿರುವ ಯೋಧರ ನಿತ್ಯದ ಕಾರ್ಯಗಳು ಪ್ರತಿ ಭಾರತೀಯನಲ್ಲೂ ಚೈತನ್ಯವನ್ನು ತುಂಬಿಸುತ್ತದೆ.
14,000 ಅಡಿ ಎತ್ತರದಲ್ಲಿರುವ ಸಿಕ್ಕಿಂನ ಹಿಮಾವೃತ ಪ್ರದೇಶದಲ್ಲಿರುವ ಬಾರ್ಡರ್ ಔಟ್ ಪೋಸ್ಟ್ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ವಾಲಿಬಾಲ್ ಆಡುತ್ತಿರುವ ದೃಶ್ಯ ಅವರ ಲವಲವಿಕೆಯನ್ನು ಪ್ರತಿಬಿಂಬಿಸುತ್ತದೆ.
ಯೋಧರು ಹಿಮಾವೃತ ಪ್ರದೇಶದಲ್ಲಿ ವಾಲಿಬಾಲ್ ಆಡುತ್ತಿರುವ ದೃಶ್ಯವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದೆ.
“ಐಟಿಬಿಪಿಯ ಹಿಮವೀರರು 14 ಸಾವಿರ ಅಡಿ ಎತ್ತರದಲ್ಲಿ ತೀವ್ರ ಹಿಮ ಪರಿಸ್ಥಿತಿಯಲ್ಲಿ ವಾಲಿಬಾಲ್ ಆಡುತ್ತಿದ್ದಾರೆ” ಎಂದಿದೆ.
ಕೆಲದಿನಗಳ ಹಿಂದೆಯಷ್ಟೇ ಬಿಎಸ್ಎಫ್ ತನ್ನ ಯೋಧರು ಕಾಶ್ಮೀರದ ಹಿಮಾವೃತ ಪರ್ವತದಲ್ಲಿ, ಹೆಪ್ಪುಗಟ್ಟು ವಂತಹ ತಾಪಮಾನದಲ್ಲಿ ಬಿಹು ಆಚರಿಸುತ್ತಿರುವ ಮತ್ತು ನೃತ್ಯ ಮಾಡುತ್ತಿರುವ ದೃಶ್ಯವನ್ನು ಟ್ವೀಟ್ ಮಾಡಿತ್ತು.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಯೋಧರ ಆಟವನ್ನು “ಫಿಟ್ ಇಂಡಿಯಾ ಎತ್ತರಗಳ ಆಚೆಗೂ” ಎಂದು ಬಣ್ಣಿಸಿದ್ದಾರೆ.
Fit India 🇮🇳 Movement beyond heights!
Inspiration transcends from 14,000 ft !
🏃🏻♂️🏐 ⚽️🏋️🤾🏽🧘🏽🚴
| @ITBP_official @FitIndiaOff | https://t.co/UwPsVaYhUL
— Anurag Thakur (@ianuragthakur) January 18, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.