ಬೆಂಗಳೂರು : ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಇಂದು ಮತ್ತೊಂದು ಪತ್ರಿಕಾಗೋಷ್ಟಿ ನಡೆಸಿ, ತಮ್ಮ ಕಾಲದ ಮೇಕೆದಾಟು ಘಟನೆಗಳನ್ನು ಇತಿಹಾಸದ ರೂಪದಲ್ಲಿ ಬಿಂಬಿಸಿ ತಮ್ಮ ಅಧಿಕಾರಾವಧಿಯಲ್ಲಿ ಅಗಿರುವ ವಿಳಂಬವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಪ್ರಾರಂಭದಿಂದಲೂ ನಾನು ತಮ್ಮನ್ನು ಪ್ರಶ್ನಿಸುತ್ತಿರುವುದು ಜಲಸಂಪನ್ಮೂಲ ಸಚಿವರಾಗಿದ್ದಾಗ ತಾವು ಒಂದು ಡಿ.ಪಿ.ಆರ್. ಸಿದ್ದಪಡಿಸಲು ಅನಗತ್ಯವಾಗಿ ಕಾಲಹರಣ ಮಾಡಲಾಯಿತು ಎಂಬುದರ ಕುರಿತೇ ಹೊರತು, ತಾವು ಪಟ್ಟಿ ಮಾಡಿರುವ ಘಟನಾವಳಿಗಳು ಸರ್ಕಾರದ ಕಡತದಲ್ಲಿಯೇ ಇವೆ ಎಂದೂ ಹೇಳಿದ್ದಾರೆ.
“ಒಂದು ಡಿ.ಪಿ.ಆರ್. ಸಿದ್ದಪಡಿಸುವುದಕ್ಕಾಗಿ ಏಜೆನ್ಸಿ ಅಂತಿಮಗೊಳಿಸಲು, ತಾವು 4 ಪೂರ್ಣ ವರ್ಷಗಳ ಕಾಲ ಹರಣ ಮಾಡಿದ್ದನ್ನು ತಾವೇ ಇಂದು ಒಪ್ಪಿಕೊಂಡಿದ್ದೀರಿ. ತಾವು ಸಭೆಗಳನ್ನು ನಡೆಸಿದ್ದು, ಯಾವುದೇ ಪರಿಣಾಮ ಬೀರಲಿಲ್ಲ ಎಂಬುದು ಸಹ ಇದರಿಂದ ವ್ಯಕ್ತವಾಗುತ್ತದೆ” ಎಂದು ತಿಳಿಸಿದ್ದಾರೆ.
ಒಂದು ಸಮಾಲೋಚನಾ ಏಜೆನ್ಸಿ ಅಂತಿಮಗೊಳಿಸಲು, ಮೇಕೆದಾಟು ವಿನಂತಿಸಿ ಯೋಜನೆಯ ಮೇಕೆದಾಟುವಿನಂತಹ ರಾಜ್ಯದ ಮಹತ್ವದ ಪ್ರತಿಷ್ಠಿತ ಯೋಜನೆಗೆ ಡಿ.ಪಿ.ಆರ್. ಸಿದ್ಧಪಡಿಸಲು ತಾವು ವ್ಯಯ ಮಾಡಿದ ಸಮಯ ಸರಿ ಎಂದು ತಮಗನ್ನಿಸುತ್ತದೆಯೇ? ಇದು ವೃಥಾ ಕಾಲಹರಣವಲ್ಲವೇ? ಎಂದು ಪ್ರಶ್ನಿಸಿದರು.
ತಮ್ಮ ಕಾಲದಲ್ಲಿ ಏನು ನಡೆದಿದೆ ಎಂಬ ಘಟನಾವಳಿಗಳ ಇತಿಹಾಸದ ಕುರಿತು ಯಾರೂ ನಿಮ್ಮನ್ನು ಪ್ರಶ್ನಿಸಲ್ಲ. ಆ ಇತಿಹಾಸದ ಕುರಿತು ಹೇಳುವ ಅಗತ್ಯವೂ ಇಲ್ಲ. ತಾವೇ ಹೇಳಿದಂತೆ 4ಜಿ ಕೇಳಿದ್ದು, ದಿನಾಂಕ:10.09.2013ರಂದು 4ಜಿ ದೊರಕಿದ್ದು ದಿನಾಂಕ:25.02.2016ರಂದು ಇನ್ನಷ್ಟು ಕಾಲಹರಣವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.