ಕಲ್ಬುರ್ಗಿ: ತಮ್ಮ ಪೋಷಕರು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಸುಮಾರು 50 ವರ್ಷಗಳ ನಂತರ ಯಾದಗಿರಿ ಜಿಲ್ಲೆಯ 55 ವರ್ಷದ ಕೃಷಿ ಕಾರ್ಮಿಕರೊಬ್ಬರು ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಮರಳಲು ನಿರ್ಧರಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಗುರ್ಮಿಟ್ಕಲ್ ತಾಲೂಕಿನ ಕಣಿಕಲ್ ಗ್ರಾಮದಲ್ಲಿ ವಾಸವಾಗಿರುವ ತಿಮೋತಿ ಹೊಸಮನಿ ಅವರು ಚಿಕ್ಕವರಾಗಿದ್ದಾಗಲೇ ಅವರ ಹೆತ್ತವರಾದ ಜ್ಞಾನಮಿತ್ರ ಮತ್ತು ಸೌಭಾಗ್ಯ ಕ್ರಿಶ್ಚಿಯನ್ ಮತವನ್ನು ಸ್ವೀಕರಿಸಿದ್ದರು. ಆದರೀಗ ಅವರು ಹಿಂದೂ ಧರ್ಮ ಸ್ವೀಕರಿಸಲು ಮುಂದಾಗಿದ್ದಾರೆ.
“ಯಾಕಾಗಿ, ಯಾವ ಸಂದರ್ಭದಲ್ಲಿ ನನ್ನ ಹೆತ್ತವರು ಕ್ರಿಶ್ಚಿಯನ್ ಮತ ಸ್ವೀಕಾರ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಈಗ, ನಾವು ನಮ್ಮ ಮೂಲ ಧರ್ಮಕ್ಕೆ ಮರಳಲು ತಯಾರಿ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಅವರ ತಂದೆ 10 ವರ್ಷಗಳ ಹಿಂದೆ ಮತ್ತು ತಾಯಿ ಆರು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ಹೊಸಮನಿ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಅವರ ಕುಟುಂಬ, ಪತ್ನಿ ಶಾರದಮ್ಮ, ಮಕ್ಕಳಾದ ಅಭಿಷೇಕ್, ಜ್ಞಾನಮಿತ್ರ ಮತ್ತು ನೀಲ್ ಆರ್ಮ್ಸ್ಟ್ರಾಂಗ್ ಕೆಲವು ವರ್ಷಗಳಿಂದ ಹಿಂದೂ ಆಚರಣೆಗಳು ಮತ್ತು ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇವರ ಹಿರಿಯ ಮಗ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಇನ್ನಿಬ್ಬರು ಓದುತ್ತಿದ್ದಾರೆ.
ಮಾತೃ ಧರ್ಮಕ್ಕೆ ಕಾನೂನುಬದ್ಧವಾಗಿ ಮರಳುವುದನ್ನು ಗುರುತಿಸಲು ಸರಳ ಸಮಾರಂಭವನ್ನು ನಡೆಸಲು ಹೊಸಮನಿ ಕುಟುಂಬ ಯೋಜಿಸುತ್ತಿದೆ ಎನ್ನಲಾಗಿದೆ.
ಕರ್ನಾಟಕದ ಹಲವೆಡೆ ಇಂತಹ ಘಟನೆಗಳು ನಡೆದಿದ್ದು, ಮತಾಂತರಗೊಂಡವರು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ಸಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.