ಬೆಂಗಳೂರು: ಕರ್ನಾಟಕದ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ ಮೂರು ಗಂಟೆಗಳಿಂದ 90 ನಿಮಿಷಗಳಿಗಿಂತ ಕಡಿಮೆ ಮಾಡಲು ಉದ್ದೇಶಿಸಿರುವ ರೂ 8,172 ಕೋಟಿ ವೆಚ್ಚದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಅಕ್ಟೋಬರ್ 2022 ರ ವೇಳೆಗೆ ಪೂರ್ಣಗೊಳ್ಳಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಧಿಕಾರಿಗಳ ಪ್ರಕಾರ, ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟದವರೆಗಿನ ಹಂತ-1 ಮೇ 2022 ರ ವೇಳೆಗೆ ಸಿದ್ಧವಾಗಲಿದೆ, ನಿಡಘಟ್ಟದಿಂದ ಮೈಸೂರಿಗೆ ಎರಡನೇ ಹಂತ ಸೆಪ್ಟೆಂಬರ್ನೊಳಗೆ ಪೂರ್ಣಗೊಳ್ಳಲಿದೆ.
ಕೋವಿಡ್ -19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಉದ್ಯೋಗಿ ಮತ್ತು ಸಾಮಗ್ರಿಗಳ ಕೊರತೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಈ 117 ಕಿಮೀ ಉದ್ದದ ಯೋಜನೆಯ ಪೂರ್ಣಗೊಳ್ಳುವ ಗಡುವನ್ನು ಪದೇ ಪದೇ ಮುಂದೂಡಲಾಗಿದೆ.
ಎನ್ಎಚ್ಎಐ ಅಧಿಕಾರಿಯೊಬ್ಬರ ಪ್ರಕಾರ, ಹಂತ -1 ರಲ್ಲಿ 56.2 ಕಿಮೀ ರಸ್ತೆ 83%ದಷ್ಟು ಕೆಲಸ ಪೂರ್ಣಗೊಂಡಿದೆ, 61.1 ಕಿಮೀ ಇರುವ ಹಂತ -2 ರಲ್ಲಿ 78% ಪೂರ್ಣಗೊಂಡಿದೆ.
“ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ ಆರ್ಆರ್ ವೈದ್ಯಕೀಯ ಕಾಲೇಜಿನಿಂದ ಕ್ರೈಸ್ಟ್ ಯೂನಿವರ್ಸಿಟಿವರೆಗಿನ ಎಲಿವೇಟೆಡ್ ವಿಭಾಗದ ಸುಮಾರು 85% ಪೂರ್ಣಗೊಂಡಿದೆ ಮತ್ತು ಮೂರು ಸೇತುವೆಗಳು ಸಿದ್ಧವಾಗಿವೆ, ನಾಲ್ಕನೆಯದು ಸಿದ್ಧವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ನಿಡಘಟ್ಟದಿಂದ ಮೈಸೂರು ಭಾಗಕ್ಕೆ 3.38 ಕಿ.ಮೀ ಎತ್ತರದ ಎಲಿವೇಟೆಡ್ ಹೆದ್ದಾರಿಗೆ ಅಡಿಪಾಯ ಮತ್ತು ಕಾಮಗಾರಿ ಪೂರ್ಣಗೊಂಡಿದೆ. ವಿಭಾಗಗಳು ಮತ್ತು ಇಕ್ಕೆಲಗಳ ನಿರ್ಮಾಣ ಪ್ರಗತಿಯಲ್ಲಿದೆ ಮತ್ತು ಒಟ್ಟಾರೆ ಕೆಲಸದಲ್ಲಿ 78% ಪೂರ್ಣಗೊಂಡಿದೆ”ಎಂದಿದ್ದಾರೆ.
10 ಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಬೆಂಗಳೂರಿನಿಂದ ನಿಡಗಟ್ಟಕ್ಕೆ 56 ಕಿಮೀ ಮತ್ತು ನಿಡಗಟ್ಟದಿಂದ ಮೈಸೂರಿಗೆ 61 ಕಿಮೀ ಎರಡು ವಿಭಾಗಗಳನ್ನು ಭೋಪಾಲ್ ಮೂಲದ ದಿಲೀಪ್ ಬಿಲ್ಡ್ಕಾನ್ ನಿರ್ಮಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.