ಬೆಂಗಳೂರು: 2024 ರ ವೇಳೆಗೆ ಕರ್ನಾಟಕವನ್ನು 1.5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವುದು ಮತ್ತು ರಾಜ್ಯದ ಯುವಜನರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನನ್ನ ಕನಸು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ- ಇನ್ಫಿನಿಟ್ ಅಪಾರ್ಚುನಿಟಿಸ್ನಲ್ಲಿ ಸಂವಾದ ಸೆಷನ್ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ನಾನು ಧಾವಂತದ ಮನುಷ್ಯ. 1.5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ನಾನು 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದದ್ದಾರೆ.
ಅವರ ಕನಸಿನ ಬಗ್ಗೆ ಅಚ್ಚರಿಯಾದರೂ ಅವರು ನೀಡಿದ ಲೆಕ್ಕಾಚಾರಗಳು ಗುರಿ ತಲುಪುವ ನಿಟ್ಟಿನಲ್ಲಿ ಸರಿಯಾಗಿಯೇ ಇದೆ ಎಂಬುದರಲ್ಲಿ ಅನುಮಾನವಿಲ್ಲ.
“ಕೃಷಿಯಲ್ಲಿ ಶೇಕಡಾ 1ರಷ್ಟು ಬೆಳವಣಿಗೆಯು ಉತ್ಪಾದನಾ ವಲಯದಲ್ಲಿ ಶೇಕಡಾ 4 ಮತ್ತು ಸೇವೆಗಳಲ್ಲಿ ಶೇಕಡಾ 10 ರಷ್ಟು ಬೆಳವಣಿಗೆಯಾಗಿ ಪರಿವರ್ತಿತಗೊಳ್ಳುತ್ತದೆ. ಹೀಗಾಗಿ ಕೃಷಿಯಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುವ ಮೂಲಕ ನಾವು ನಮ್ಮ ಗುರಿ ತಲುಪಬಹುದು’ ಎಂದು ಸಿಎಂ ಬೊಮ್ಮಾಯಿ ವಿವರಿಸಿದ್ದಾರೆ.
ಉದ್ಯೋಗಗಳನ್ನು ಖಾತ್ರಿಪಡಿಸುವುದು ನಾವು ತಕ್ಷಣ ಮಾಡಬೇಕಾದ ಕೆಲಸ ಮತ್ತು ಕಂಪನಿಗಳು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಪ್ರೋತ್ಸಾಹ ನೀಡುವ ಹೊಸ ನೀತಿಯನ್ನು ನಮ್ಮ ಸರ್ಕಾರವು ಜಾರಿಗೆ ತರುತ್ತಿದೆ ಎಂದಿದ್ದಾರೆ.
“ಪ್ರತಿ ವರ್ಷ ನಾವು 1 ಲಕ್ಷಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ಉತ್ಪಾದಿಸುತ್ತೇವೆ ಆದರೆ ಅವರಲ್ಲಿ 65,000 ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಇದನ್ನು ನಾವು ಸರಿಪಡಿಸಬೇಕಿದ ”ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.