ಬೆಂಗಳೂರು: ಬಿಟ್ ಕಾಯಿನ್ ಹಗರಣದ ಆಯಾಮ ಕಿಂಚಿತ್ತು ಇಲ್ಲ ಆದ್ದರಿಂದ ಈ ಹಗರಣದಲ್ಲಿ ಯಾವುದೇ ಪಾತ್ರಧಾರಿಗಳು ಇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೊಂದು ವಿಕೃತಿ ಅಷ್ಟೇ. ಆದರೆ ಈ ಪ್ರಹಸನದಲ್ಲಿ ಹೊಸ ಹೊಸ ಪಾತ್ರದಾರಿಗಳು ಹೊರಹೊಮ್ಮಿದ್ದು ಸಣ್ಣ ಕಡ್ಡಿಯನ್ನು ಗುಡ್ಡದಂತೆ ಬಿಂಬಿಸುತ್ತಿದ್ದಾರೆ. ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ ವಿಷಯವನ್ನು ತಿರುಚಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಕೀಳು, ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಜನ ಸತತವಾಗಿ ತಿರುಚಿದ ಪಕ್ಷಪಾತಿ ಮಾಹಿತಿಗಳನ್ನು ಬಿಡುಗಡೆ ಮಾಡಿ ತೇಜೋವಧೆ ಅಭಿಯಾನದಲ್ಲಿ ತೊಡಗಿದ್ದಾರೆ. ನ್ಯಾಯಾಲಯ ವಿಚಾರಣೆ ಇನ್ನೂ ನಡೆಯುತ್ತಿದ್ದರು ಲೆಕ್ಕಿಸದೆ ತಮ್ಮ ದುರುದ್ದೇಶಿತ ಅಭಿಯಾನ ಮುಂದುವರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
“ಹ್ಯಾಕರ್ ಶ್ರೀಕೃಷ್ಣನ ಖಾತೆಯಿಂದ ಯಾವುದೇ ಬಿಟ್-ಕಾಯಿನ್ ಗಳನ್ನು ವರ್ಗಾಯಿಸಿಲ್ಲ, ಯಾವುದೇ ಬಿಟ್-ಕಾಯಿನ್ ಕಳುವು ಆಗಿಲ್ಲ, ಕ್ರಿಪ್ಟೋಕರೇನ್ಸಿ ಪ್ರಕರಣ ತನಿಖೆಗಾಗಿ ಬಿಟ್ ಕಾಯಿನ್ ಖಾತೆ ತೆರೆಯಬೇಕೆಂದು ಪರಿಗಣಿಸಲಾಯಿತು. ಅದರಂತೆ ಸರ್ಕಾರ 8.12. 2020 ರಂದು ಬಿಟ್ ಕಾಯಿನ್ ಖಾತೆ ತೆರೆಯಲು ಅಧಿಸೂಚನೆ ಹೊರಡಿಸಿತ್ತು. ಬಿಟ್ ಕಾಯಿನ್ ಗುರುತಿಸುವಿಕೆ ಮತ್ತು ಜಪ್ತಿ ಪ್ರಕ್ರಿಯೆ ಸಂದರ್ಭದಲ್ಲಿ ಆರೋಪಿ ಶ್ರೀಕೃಷ್ಣ BTC ವ್ಯಾಲೇಟ್ ತೋರಿಸಿದರು ಅದರಲ್ಲಿ 31.8 ಬಿಟ್ ಕಾಯಿನ್ ಗಳಿದ್ದವು ಸೈಬರ್ ತಜ್ಞರು ಸರಕಾರಿ ಪಂಚರ ಉಪಸ್ಥಿತಿಯಲ್ಲಿ ವ್ಯಾಲೆಟ್ ನ ಪಾಸ್ವರ್ಡ್ ಬದಲಿಸಲಾಯಿತು ಈ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆʼ ಎಂದಿದೆ.
ತದನಂತರ ಈ ಬಿಟ್ ಕಾಯಿನ್ ಗಳನ್ನು ಪೊಲೀಸ್ ವ್ಯಾಲೆಟ್ ಖಾತೆಗೆ ವರ್ಗಾಯಿಸಲು ನ್ಯಾಯಾಲಯದ ಅನುಮತಿ ಪಡೆಯಲಾಯಿತು. ಶ್ರೀಕೃಷ್ಣ ತೋರಿಸಿದ ವ್ಯಾಲೆಟ್ ತೆರೆದಾಗ 186. 811 ಬಿಟ್ ಕಾಯಿನ್ ಗಳು ಕಂಡುಬಂದವು, ಸೈಬರ್ ತಜ್ಞರ ಪ್ರಕಾರ ಇವು ಆರೋಪಿಯ ವೈಯಕ್ತಿಕ ಕಥೆಯಲ್ಲ ಬದಲಿಗೆ ಇದೊಂದು ಬಿಟ್-ಕಾಯಿನ್ ವಿನಿಮಯ ಕೇಂದ್ರದ ವ್ಯಾಲೇಟ್ ಆಗಿತ್ತು. ಆದ್ದರಿಂದ ಈ ಖಾತೆಯನ್ನು ಮುಟ್ಟಲಿಲ್ಲ ಯಾವುದೇ ಬಿಟ್ ಕಾಯಿನ್ ಪೊಲೀಸ್ ಖಾತೆಗೆ ವರ್ಗಾಯಿಸಿಲ್ಲ. ಈ ಅಂಶಗಳು ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದಿದೆ.
ಇಲ್ಲಿ ಪೊಲೀಸ್ರು ತಜ್ಞರ ಸಹಯೋಂದಿಗೆ ಅತ್ಯಂತ ಪಾರದರ್ಶಕ ರೀತಿಯಲ್ಲ್ ಕಾರ್ಯನಿರ್ವಹಿಸಿ ದಾಖಲೆಗಳನ್ನು ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ. ನಿಸ್ಪಕ್ಷಪಾತ, ನ್ಯಾಯಯುತ ತನಿಖೆಗೆ ದಕ್ಕೆಯಾಗದಂತೆ ಪೊಲೀಸ್ರ್ ಕಾರ್ಯನಿರ್ವಹಿಸಿದ್ದಾರೆಂದು ಪುನರ್ಚ್ಚರಿಸುತ್ತೇವೆ. ಆದ್ದರಿಂದ ಪ್ರಸ್ತುತ ಆರೋಪಗಳು ನಿರಾಧಾರಯುತ ಹಾಗೂ ಸತ್ಯಕ್ಕೆ ದೂರವಾಗಿದ್ದು ಎಂದಿದೆ.
ಕಾನೂನು ಜಾರಿ/ ತನಿಖಾ ಸಂಸ್ಥೆಗಳು ಈ ದೇಶದ ಕಾನೂನು , ನಿಯಮಾವಳಿಗಳ ಪ್ರಕಾರ ಕಾರ್ಯನಿರ್ವಹಿಸುತ್ತೇವೆ . ಈ ಸಂಸ್ಥೆಗಳು ಧೃಢೀಕರಣವಿಲ್ಲದ ಸಾಮಾಜಿಕ ಜಾಲ ತಾಣಗಳ ಮಾಹಿತಿಯನ್ನಾಧರಿಸಿ ಕಾರ್ಯನಿರ್ವಹಿಸಿಸಲು ಅಪೇಕ್ಷಿಸಲಾಗದು. ಮತ್ತೊಂದು ವಾಸ್ತವ ಸಂಗತಿಯೆಂದರೆ ಆರೋಪಿಯು ಬಂಧನ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದಿದಿದ್ದರೂ, ಇದುವರೆಗೆ ಯಾವುದೇ ವಿದೇಶಿ ಕಾನೂನು ಜಾರಿ ಸಂಸ್ಥೆಗಳು ಅಥವಾ ಕಂಪನಿಗಳು ಬೆಂಗಳೂರು ಪೊಲೀಸ್ ರನ್ನು ಈ ಹ್ಯಾಕಿಂಗ್ ಬಗ್ಗೆ ಸಂಪರ್ಕಿಸಿಲ್ಲ. ಬಿಟ್ ಫಿನೆಕ್ಸ್ ಕಂಪನಿ ಸಹ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಮಾಹಿತಿ ಕೋರಲ್ಲೂ ಇಲ್ಲ ಎಂದಿದೆ.
ಆದ್ದರಿಂದ, “ವೇಲ್ ಅಲರ್ಟ್” ತಿಳಿಸಿತ್ತು ಎನ್ನಲಾದ ಬಿಟ್ ಫಿನೆಕ್ಸ್ನ 14,682 ಬಿಟ್ ಕಾಯಿನ್ಗಳ ವರ್ಗಾವಣೆ ಮಾಹಿತಿ ಸಂಪೂರ್ಣ ನಿರಾಧಾರದ್ದು ಹಾಗೊಂದು ವೇಳೆ ಅಂತಹ ವ್ಯವಹಾರ ನಡೆದಿದ್ದರೂ ಅವರ ಬೆಂಗಳೂರು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಈ ಪ್ರಕರಣದ ಮೊದಲ ವ್ಯವಹಾರ (Transaction) ನಡೆದು ಸುಮಾರು ಒಂದು ವರ್ಷ ಕಳೆದಿದ್ದರೂ ಬಿಟ್ ಫಿನೆಕ್ಸ್/ಕಾನೂನು ಜಾರಿ ಸಂಸ್ಥೆಗವಳ ಯಾವುದೇ ಪ್ರತಿನಿಧಿಗಳು ಬೆಂಗಳೂರು ಪೊಲೀಸ್ ರನ್ನು ಅಥವಾ ಇನ್ನಾವುದೇ ಸಂಸ್ಥೆಯನ್ನು ಸಂಪರ್ಕಿಸಿಲ್ಲ ಎಂದಿದೆ.
ತನಿಖೆಯನ್ನು ಡಿಐಜಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ ದಕ್ಷ ಅಧಿಕಾರಿಗಳ ತಂಡದಿಂದ ಅತ್ಯಂತ ಪಾರದರ್ಶಕವಾಗಿ ಕೈಗೊಳ್ಳಲಾಗಿದೆ. ಸಂಪೂರ್ಣ ತನಿಖೆಯ ಪ್ರಕ್ರಿಯೆಯಲಲ್ಲಿ ಸ್ವತಂತ್ರ ಸರ್ಕಾರಿ ಪಂಚರು, ಐಐಎಸ್ ಸಿಯ ನೆರವು, ಇ-ಆಡಳಿತ, ಗ್ರೂಪ್ ಸೈಬರ್ ಐಡಿಯ ಸೈಬರ್ ತಜ್ಞರು ಭಾಗವಹಿಸಿದ್ದರು. ಯಾವುದೇ ಹಂತದಲ್ಲಿ ಗೃಹ ಸಚಿವರು ಅಥವಾ ಯಾವುದೇ ರಾಜಕಾರಣಿ ಈ ತನಿಖೆಯೊಂದಿಗೆ ಸಂಬಂಧ ಹೊಂದಿರಲಿಲ್ಲ. ತನಿಖೆಯ ಮಾಹಿತಿಯನ್ನು ಸವಿವರವಾಗಿ ದಾಖಲಿಸಿ ಕಾಲ ಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆ ಮೂಲಕ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಿರ್ವಹಿಸಲಾಗಿದೆ ಎಂದಿದೆ.
ಆರೋಪಿಯು ಭಾರಿ ಪ್ರಮಾಣದಲ್ಲಿ ವೆಬ್ ಸೈಟುಗಳನ್ನು ಹ್ಯಾಕಿಂಗ್ ಮಾಡಿರುವ ಕುರಿತು ತನ್ನ ಸ್ವಯಂ ಪ್ರೇರಿತ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಆದರೆ ಈ ಕುರಿತು ನಿಖರ ವಿವರಗಳನ್ನು ನೀಡಿರಲಿಲ್ಲ. ಆದ್ದರಿಂದ ಆತನ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಪ್ರಾಥಮಿಕ ತನಿಖೆ ನಡೆಸಿ ಖಚಿತಪಡಿಸಿಕೊಳ್ಳಲಾಯಿತು. ಸೈಬರ್ ತಜ್ಞರು ಡಿಜಿಟಲ್ ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆತನ ಹೇಳಿಕೆಗಳಲ್ಲಿ ಬಹುಪಾಲು ಆಧಾರರಹಿತ ಎಂದು ತಿಳಿಸಿದರು. ಈ ಪ್ರಕ್ರಿಯೆಗೆ ಸಮಯ ಹಿಡಿಯಿತು. ನಂತರ ವರದಿಯನ್ನು ಸೂಕ್ತ ಕ್ರಮಕ್ಕಾಗಿ ಇಂಟರ್ ಪೋಲ್ ಗೆ ಕಳುಹಿಸಲಾಯಿತು ಎಂದಿದೆ.
ಆರೋಪಿಯು ಹೇಳಿಕೆಯಲ್ಲಿ ತಿಳಿಸಿದ ಮಾಹಿತಿಯಂತೆ ಯಾವುದೇ ದೇಶದಿಂದ ಕಾನೂನು ರೀತ್ಯ ಪ್ರಕರಣದ ಮಾಹಿತಿ ಕೋರಿ ಯಾವುದೇ ಮನವಿ ಬಂದಿರುವುದಿಲ್ಲ. ಅಥವಾ ಬೆಂಗಳೂರಿನಿಂದ ಯಾವುದೇ ಹ್ಯಾಕಿಂಗ್ ಆಗಿರುವ ಕುರಿತು ಮಾಹಿತಿ ಬಂದಿರುವುದಿಲ್ಲ. ಅದಾಗ್ಯೂ ಆರೋಪಿ ಶ್ರೀಕೃಷ್ಣನ ಹೇಳಿಕೆಯಲ್ಲಿ ಹಲವು ಕ್ರಿಪ್ಟೊ ಕರೆನ್ಸಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿದ ಕಾರಣ ಈ ವಿಷಯವನ್ನು ದಿನಾಂಕ 28-4-2021 ರಂದು ಸಂಬಂಧಿಸಿದ ದೇಶಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಿಬಿಐ ಇಂಟರ್ ಪೋಲ್ ವಿಭಾಗಕ್ಕೆ ಸಕ್ಷಮ ಪ್ರಾಧಿಕಾರದ ಮೂಲಕ ಮಾಹಿತಿ ನೀಡಲಾಗಿತ್ತು. ಇದೇ ಮಾಹಿತಿಯನ್ನು ಇ.ಡಿ. ಗೆ ದಿನಾಂಕ 3-3-2021 ರಂದು ಪ್ರಕರಣದ ದಾಖಲೆಗಳೊಂದಿಗೆ ಒದಗಿಸಲಾಗಿತ್ತು. ಆದರೆ ತನಿಖಾಧಿಕಾರಿಗಳು ಪ್ರಕರಣದ ಕುರಿತಂತೆ ಇ.ಡಿ.ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಈ ವಿಷಯಕ್ಕೆ ಸಂಬಂಧಿಸಿದ ತನಿಖಾ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು ಎಂಬುದನ್ನು ಗಮನಿಸಬೇಕು ಎಂದು ಬಿಜೆಪಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.