ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ ನ.5 ರಂದು ಶುಕ್ರವಾರ ನಡೆಯಿತು.
ಪೊಳಲಿ ದೇವಸ್ಥಾನದ ಅರ್ಚಕರಾದ ಶ್ರೀ ನಾರಾಯಣ ಭಟ್ ಹಾಗೂ ಶ್ರೀ ಪರಮೇಶ್ವರ ಭಟ್ ಅವರು ಗರ್ಭಗುಡಿಯಿಂದ ದೀಪವನ್ನು ಉಪೇಕ್ಷಿತರ ಕುಟುಂಬದ ಸದಸ್ಯರಾದ ಶ್ರೀಮತಿ ಗೀತಾ ಮತ್ತು ಶ್ರೀ ಗಣೇಶ್ ಅವರಿಗೆ ನೀಡಿದರು.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ದೇವಸ್ಥಾನದ ಅರ್ಚಕರು ಕೊಟ್ಟ ದೀಪವನ್ನು ಉಪೇಕ್ಷಿತ ಬಂಧು ಶ್ರೀ ಗಣೇಶ್ ಸಾಣೂರೊಪದವು ಅವರ ಮನೆಯಲ್ಲಿ ದೇವರ ಮುಂದೆ ಇಟ್ಟು ಅಲ್ಲಿಯೂ ದೀಪಗಳನ್ನು ಬೆಳಗಿಸಿ ಅವರೊಂದಿಗೆ ಊರಿನವರೆಲ್ಲ ಒಟ್ಟಾಗಿ ಉಪಹಾರವನ್ನು ಸ್ವೀಕರಿಸಿ, ದೀಪಾವಳಿಯನ್ನು ಅವರೊಂದಿಗೆ ಆಚರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.