
ನವದೆಹಲಿ: ಅತ್ಯಂತ ಜನಪ್ರಿಯ ‘ಮಿಲೇ ಸುರ್ ಮೇರಾ ತುಮ್ಹಾರಾ’ ಹಾಡನ್ನು ಭಾರತೀಯ ರೈಲ್ವೆಯ ಉದ್ಯೋಗಿಗಳು ಮತ್ತು ಅಧಿಕಾರಿಗಳು ಹೊಸ ರೂಪದಲ್ಲಿ ಪ್ರಸ್ತುತಪಡಿಸಿ ಹಾಡಿದ್ದಾರೆ.
ಟೋಕಿಯೊ 2020 ಒಲಿಂಪಿಕ್ಸ್ ಪದಕ ವಿಜೇತರು, ರೈಲ್ವೇ ಸಚಿವರು ಮತ್ತು ಇತರ ಪ್ರಸಿದ್ಧ ರೈಲ್ವೆ ವ್ಯಕ್ತಿಗಳನ್ನು ಒಳಗೊಂಡ ಭಾರತೀಯ ರೈಲ್ವೆಯ ಉದ್ಯೋಗಿಗಳು ಮತ್ತು ಅಧಿಕಾರಿಗಳು ಸಂಯೋಜಿಸಿ ಹಾಡಿದ ಹೊಸ ಆವೃತ್ತಿಯು ಎಲ್ಲರ ಮನಗೆದ್ದಿದೆ.
ರೈಲ್ವೇ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಷ್ ಅವರು ಶುಕ್ರವಾರ ಮಲೆ ಸುರ್ ಮೇರಾ ತುಮ್ಹಾರಾ ಹಾಡಿನ ಹೊಸ ಆವೃತ್ತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.
ಹಾಡಿನ ಹೊಸ ಆವೃತ್ತಿಯನ್ನು ರೈಲ್ವೆ ಉದ್ಯೋಗಿಗಳು ಮತ್ತು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಸಚಿವಾಲಯದ ಉಪಕ್ರಮದ ಭಾಗವಾಗಿದೆ. ಉಪಕ್ರಮದಡಿಯಲ್ಲಿ ಭಾರತೀಯ ರೈಲ್ವೆಯ ಸಾಧನೆಗಳು, ಬೆಳವಣಿಗೆಗಳು ಮತ್ತು ದೇಶಾದ್ಯಂತದ ಏಕೀಕರಣವನ್ನು ಪ್ರದರ್ಶಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದರ್ಶನಾ ಜರ್ದೋಷ್, “ಆಜಾದಿ ಕಾ ಅಮೃತ್ ಮಹೋತ್ಸವದ ಒಂದು ಭಾಗವಾಗಿ, ಈ ಹಾಡು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುತ್ತದೆ. ಹಾಡಿನ ಹೊಸ ಆವೃತ್ತಿಯು ರೈಲ್ವೇ ಉದ್ಯೋಗಿಗಳನ್ನು ಮಾತ್ರವಲ್ಲದೆ ಇಡೀ ರಾಷ್ಟ್ರವನ್ನು ಪ್ರೇರೇಪಿಸುತ್ತದೆ. ಇದು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ” ಎಂದಿದ್ದಾರೆ.
https://twitter.com/DarshanaJardosh/status/1446421618238967811?ref_src=twsrc%5Etfw%7Ctwcamp%5Etweetembed%7Ctwterm%5E1446421618238967811%7Ctwgr%5E%7Ctwcon%5Es1_&ref_url=https%3A%2F%2Fwww.thestatesman.com%2Findia%2Ficonic-mile-sur-mera-tumhara-song-now-fresh-version-prepared-sung-employees-officers-indian-railways-1503016137.html
ಈ ಹಾಡನ್ನು ರೈಲ್ವೇ ಉದ್ಯೋಗಿಗಳು ಪ್ರತ್ಯೇಕವಾಗಿ ಹಾಡಿದ್ದಾರೆ. ಇದರ ವೀಡಿಯೋದಲ್ಲಿ ವಿವಿಧ ರೈಲ್ವೆ ಉದ್ಯೋಗಿಗಳು, ಪ್ರಖ್ಯಾತ ರೈಲ್ವೆ ಕ್ರೀಡಾಪಟುಗಳು, ಟೋಕಿಯೊ ಒಲಿಂಪಿಕ್ ಪದಕ ವಿಜೇತರು, ಖ್ಯಾತ ವ್ಯಕ್ತಿಗಳು, ರೈಲ್ವೆ ಅಧಿಕಾರಿಗಳು ಮತ್ತು ರೈಲ್ವೇ ಸಚಿವರು ಮತ್ತು ರೈಲ್ವೇ ರಾಜ್ಯ ಸಚಿವರು ಇದ್ದಾರೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
‘ಮಿಲೇ ಸುರ್ ಮೇರಾ ತುಮ್ಹಾರಾ’ದ ಹಳೆಯ ಆವೃತ್ತಿಯು 1988 ರಲ್ಲಿ ಸ್ವಾತಂತ್ರ್ಯ ದಿನದಂದು ಮೊದಲ ಬಾರಿಗೆ ಪ್ರಸಾರವಾಗಿತ್ತು. ಹೊಸ ಆವೃತ್ತಿಯಲ್ಲಿ ಮೂಲ ಹಾಡಿನ ಸಾಹಿತ್ಯವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ, ಆದರೆ ಸಂಗೀತವನ್ನು ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಈ ಹಾಡನ್ನು 13 ವಿವಿಧ ಭಾಷೆಗಳಲ್ಲಿ ಹಾಡಲಾಗಿದ್ದು, ಎಲ್ಲಾ ವಲಯ ರೈಲ್ವೆಗಳಲ್ಲೂ ಸೌಹಾರ್ದತೆಯ ಭಾವನೆಯನ್ನು ನೀಡಿಸುತ್ತದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
https://twitter.com/RailMinIndia/status/1446357274797088771?s=20
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


