News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸ್ಸಾಂ: ಹಿಂದೂ ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣದಿಂದ ಮುಕ್ತವಾಗಿಸುವ ಕಾರ್ಯ ಆರಂಭ

ಗುವಾಹಟಿ: ಹಿಂದೂ ಧಾರ್ಮಿಕ ಸಂಸ್ಥೆಗಳಾದ ಮಂದಿರಗಳು ಮತ್ತು ಕ್ಸತ್ರಾ (ವೈಷ್ಣವ ಮಠಗಳು) ಗೆ ಸೇರಿದ ಭೂಮಿಯನ್ನು ಬಾಂಗ್ಲಾದೇಶ ಮೂಲದ ಮುಸ್ಲಿಮರ ಅತಿಕ್ರಮಣಗಳಿಂದ ಹೊರತರಲು ಅಸ್ಸಾಂ ಸರ್ಕಾರ ಅಭಿಯಾನವನ್ನು ಆರಂಭಿಸಿದೆ.

ಜೂನ್ 6ರಂದು, ದಾರಂಗ್ ಜಿಲ್ಲೆಯ ಸಿಪಜಾರ್ ಬಳಿಯ ಧಲ್ಪುರ್ ಗ್ರಾಮದಲ್ಲಿ ಪುರಾತನ ಶಿವ ಮಂದಿರಕ್ಕೆ ಸೇರಿದ 120 ಬಿಘಾ ಭೂಮಿಯನ್ನು ಅಧಿಕಾರಿಗಳು ಅತಿಕ್ರಮಣದಿಂದ ಮುಕ್ತಗೊಳಿಸಿದ್ದಾರೆ, ಈ ಭೂಮಿಯನ್ನು ಬಾಂಗ್ಲಾದೇಶ ಮೂಲದ ಮುಸ್ಲಿಮರು ಅತಿಕ್ರಮಣ ಮಾಡಿದ್ದರು ಎನ್ನಲಾಗಿದೆ..

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಸೇರಿದ ಜಮೀನುಗಳನ್ನು ಅತಿಕ್ರಮಣಗಳಿಂದ ಮುಕ್ತಗೊಳಿಸುವ ಭರವಸೆಯನ್ನು ನೀಡಿದ್ದರು.

ಅಸ್ಸಾಂ ಸರ್ಕಾರವು ಈ ಹಿಂದೆ ಕೂಡ ಮೀಸಲು ಕಾಡುಗಳು ಸೇರಿದಂತೆ ಸರ್ಕಾರಿ ಜಮೀನುಗಳನ್ನು ಅತಿಕ್ರಮಣಗಳಿಂದ ಮುಕ್ತಗೊಳಿಸಿತ್ತು.

ಕೆಲವು ವರ್ಷಗಳ ಹಿಂದೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ಹೆಚ್ಚಿನ ಸಂಖ್ಯೆಯ ಅತಿಕ್ರಮಣಗಾರರನ್ನು ಹೊರ ಹಾಕಲಾಗಿತ್ತು. ಸರ್ಕಾರಿ ಮತ್ತು ಇತರ ಜಮೀನುಗಳಲ್ಲಿನ ಈ ಎಲ್ಲಾ ಅತಿಕ್ರಮಣಗಾರರು ಬಾಂಗ್ಲಾದೇಶದಿಂದ ಬಂದವರು ಎಂಬುದು ರಹಸ್ಯವಾಗಿ ಉಳಿದಿಲ್ಲ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top