ಜೆರುಸಲೇಂ: ಮಂಗಳವಾರ ರಾತ್ರಿ ಇಸ್ರೇಲ್ ಮೇಲೆ ಪ್ಯಾಲೇಸ್ತೇನ್ ಭಯೋತ್ಪಾದಕರು ನಡೆಸಿದ ವೈಮಾನಿಕ ದಾಳಿಯಲ್ಲಿ ಭಾರತೀಯ ಮೂಲದ ನರ್ಸ್ ಸೌಮ್ಯಾ ಸಂತೋಷ್ ಸಾವನ್ನಪ್ಪಿದ್ದಾರೆ. 31 ವರ್ಷ ಆಕೆ ಕೇರಳದ ಇಡುಕ್ಕಿ ಮೂಲದವರು. ಅವರು 10 ವರ್ಷಗಳಿಂದ ಇಸ್ರೇಲ್ನಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸೌಮ್ಯ ಅವರಿಗೆ ಕೇರಳದಲ್ಲಿ 9 ವರ್ಷದ ಮಗ ಮತ್ತು ಪತಿ ಇದ್ದಾರೆ.
ಗಾಜಾದಲ್ಲಿ ಹಮಾಸ್ ಹಾರಿಸಿದ ರಾಕೆಟ್ ಅಶ್ಕೆಲೋನ್ನಲ್ಲಿನ ಕಟ್ಟಡಕ್ಕೆ ಅಪ್ಪಳಿಸಿದ ಸಂದರ್ಭದಲ್ಲಿ ಸೌಮ್ಯಾ ಮೃತರಾಗಿದ್ದಾರೆ. ಈ ವೇಳೆ ಅವರು ಪತಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಸೌಮ್ಯ ಅವರು ನೋಡಿಕೊಳ್ಳುತ್ತಿದ್ದ ವೃದ್ಧೆ ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸೌಮ್ಯ ಅವರ ನಿಧನಕ್ಕೆ ವಿದೇಶಾಂಗ ರಾಜ್ಯ ಸಚಿವ ವಿ ಮುರಳೀಧರನ್ ಸಂತಾಪ ಸೂಚಿಸಿದ್ದಾರೆ. ಅವರು ಟ್ವೀಟ್ ಮಾಡಿದ್ದು, “ಇಂದು ಗಾಜಾದಲ್ಲಿ ನಡೆದ ರಾಕೆಟ್ ದಾಳಿಯ ಸಮಯದಲ್ಲಿ ಎಂಎಸ್ ಸೌಮ್ಯಾ ಸಂತೋಷ್ ಅವರ ನಿಧನವಾಗಿದ್ದು, ಅವರ ದುರಂತ ನಿಧನಕ್ಕೆ ಅವರ ಕುಟುಂಬಕ್ಕೆ ಸಂತಾಪವನ್ನು ತಿಳಿಸುತ್ತೇನೆ. ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಲಾಗಿದೆ. ಈ ದಾಳಿಗಳನ್ನು ಮತ್ತು ಜೆರುಸಲೆಮ್ನಲ್ಲಿನ ಹಿಂಸಾಚಾರವನ್ನು ನಾವು ಖಂಡಿಸಿದ್ದೇವೆ ಮತ್ತು ಎರಡೂ ಕಡೆಯವರು ಸಂಯಮವನ್ನು ಕಾಪಾಡುವಂತೆ ಕೋರಿದ್ದೇವೆ” ಎಂದಿದ್ದಾರೆ.
ಭಾರತದ ಇಸ್ರೇಲ್ ರಾಯಭಾರಿ ರಾನ್ ಮಾಲ್ಕಾ ಅವರು ಟ್ವೀಟ್ ಮಾಡಿ, “ ಇಸ್ರೇಲ್ ಪರವಾಗಿ, ಹಮಾಸ್ ಮುಗ್ಧ ಜೀವಗಳ ಮೇಲೆ ನಿರ್ದಾಕ್ಷಿಣ್ಯವಾಗಿ ನಡೆಸಿದ ಭಯೋತ್ಪಾದಕ ದಾಳಿಯಿಂದ ಕೊಲ್ಲಲ್ಪಟ್ಟ ಸೌಮ್ಯಾ ಸಂತೋಷ್ ಅವರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಈ ಕ್ರೂರ ಭಯೋತ್ಪಾದಕ ದಾಳಿಯಲ್ಲಿ ತಾಯಿಯನ್ನು ಕಳೆದುಕೊಂಡ ಅವರ 9 ವರ್ಷದ ಮಗನಿಗಾಗಿ ನಮ್ಮ ಹೃದಯ ಮಿಡಿಯುತ್ತಿದೆ” ಎಂದಿದ್ದಾರೆ.
On behalf of the state of #Israel, I convey heartfelt condolences to the family of Ms. Soumya Santosh, murdered by Hamas indiscriminate terror attack on innocent lives.
Our hearts are crying with her 9 years old son that lost his mother in this cruel Terrorist attack.— Ron Malka 🇮🇱 (@DrRonMalka) May 11, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.