ಬೆಂಗಳೂರು: ಕೊರೋನಾ ಸಂಕಷ್ಟದ ಅವಧಿಯಲ್ಲಿ ಮಾಸ್ಕ್ ಜನ ಸಾಮಾನ್ಯರ ಅಗತ್ಯತೆಗಳಲ್ಲಿ ಒಂದಾಗಿದ್ದು, ಕರ್ನಾಟಕದ ಸಾಮಾಜಿಕ ಕಾರ್ಯಕರ್ತ, ಯುವ ಉದ್ಯಮಿ ನಿತಿನ್ ವಾಸ್ ಎಂಬವರು ಪರಿಸರ ಸ್ನೇಹಿ ಮಾಸ್ಕ್ ಅನ್ನು ತಯಾರಿಸಿದ್ದಾರೆ.
ಈ ಮಾಸ್ಕ್ಗಳನ್ನು ಹತ್ತಿಯಿಂದ ತಯಾರಿಸಲಾಗಿದ್ದು, ಇದರಲ್ಲಿ ಹಣ್ಣಿನ ಬೀಜಗಳು, ತರಕಾರಿ ಬೀಜಗಳನ್ನು ಸೇರಿಸಲಾಗಿದೆ. ಈ ಮಾಸ್ಕ್ಗಳು ಮಣ್ಣಿಗೆ ಸೇರಿದ ಬಳಿಕ ಈ ಬೀಜಗಳು ಮೊಳಕೆಯೊಡೆಯುತ್ತವೆ. ಈ ಮಾಸ್ಕ್ ಅನ್ನು ಕೊರೋನಾ ನಿಯಂತ್ರಕವಾಗಿಯೂ ಬಳಕೆ ಮಾಡಬಹುದಾಗಿದೆ. ಜೊತೆಗೆ ಮಾಸ್ಕ್ ಹಾಳಾದ ಬಳಿಕ ಮಣ್ಣಿಗೆ ಸೇರಿದಲ್ಲಿ ಇದರಲ್ಲಿನ ಬೀಜಗಳು ಮೊಳಕೆಯೊಡೆಯುತ್ತವೆ. ಈ ಮಾಸ್ಕ್ಗಳಿಂದಾಗಿ ಪರಿಸರಕ್ಕೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಎಂದು ನಿತಿನ್ ವಾಸ್ ತಿಳಿಸಿದ್ದಾರೆ.
ಈ ಮುಖಗವಸುಗಳು ಜೈವಿಕ ವಿಘಟಕಗಳಾಗಿದ್ದು, ಇದರಲ್ಲಿರುವ ಬೀಜಗಳು ಮಣ್ಣಿಬನಲ್ಲಿ ಮೊಳಕೆಯೊಡೆದು ಸಸಿಗಳಾಗುತ್ತವೆ. ಈ ಮುಖಗವಸಿನಮೊದಲ ಪದರ ಹತ್ತಿಯಿಂದ ತಯಾರಿಸಲ್ಪಟ್ಟಿವೆ. ಒಳ ಪದರಗಳನ್ನು ಹತ್ತಿಯ ಲೈನಿಂಗ್ಗಳಿಂದ ಕೂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಮಾಸ್ಕ್ಗಳು ಅತ್ಯಂತ ಮೃದುವಾಗಿದ್ದವುಗಳಾಗಿದ್ದರೂ, ಹೆಚ್ಚು ಕಾಲ ಬಾಳಿಕೆ ಬರುತ್ತವೆ ಎಂದು ನಿತಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.