ನವದೆಹಲಿ: 51 ದೇವಾಲಯಗಳ ನಿರ್ವಹಣೆಯನ್ನು ಚಾರ್ ಧಾಮ್ ದೇವಸ್ಥಾನಂ ಮಂಡಳಿಯ ನಿಯಂತ್ರಣದಿಂದ ತೆಗೆದುಹಾಕುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಶುಕ್ರವಾರ ಘೋಷಿಸಿದ್ದು, ಮಂಡಳಿಯ ರಚನೆಯನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಮಾರ್ಗದರ್ಶಕ ಮಂಡಲದೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ದೇವಸ್ಥಾನಂ ಮಂಡಳಿಯ ಅಧೀನದಿಂದ 51 ದೇವಾಲಯಗಳನ್ನು ಹೊರ ತರಲಾಗುತ್ತಿದೆ ಎಂದಿದ್ದಾರೆ.
ಮಂಡಳಿಯ ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುತ್ತದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಅಧಿಕಾರಾವಧಿಯಲ್ಲಿ 2019 ರ ಡಿಸೆಂಬರ್ನಲ್ಲಿ ದೇವಸ್ಥಾನಂ ಮಂಡಳಿ ರಚನೆಯಾಯಿತು. ನಾಲ್ಕು ಪ್ರಸಿದ್ಧ ದೇವಾಲಯಗಳಾದ ಬದ್ರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ ರಾಜ್ಯದ 51 ದೇವಾಲಯಗಳ ನಿರ್ವಹಣೆಯನ್ನು ಇದಕ್ಕೆ ವಹಿಸಲಾಗಿತ್ತು.
ದೇವಾಲಯಗಳ ಮೇಲಿನ ನಮ್ಮ ಸಾಂಪ್ರದಾಯಿಕ ಹಕ್ಕುಗಳು ನಷ್ಟವಾಗಲಿವೆ ಎಂದು ಭಾವಿಸಿದ ಸಾಧುಗಳು ಮತ್ತು ‘ತೀರ್ಥ-ಪುರೋಹಿತರು’ ಮಂಡಳಿ ರಚನೆಯನ್ನು ಸ್ವಾಗತಿಸಲಿಲ್ಲ. ಅಂತಹ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಸರ್ಕಾರವು ಅವರಿಗೆ ಯಾವುದೇ ಭರವಸೆಯನ್ನೂ ನೀಡಿಲ್ಲ ಎಂದು ಅವರು ಆರೋಪಿಸಿದ್ದರು.
ಮಂಡಳಿಯ ರಚನೆ ಕುರಿತು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ರಾಜ್ಯ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರು ತಾತ್ಕಾಲಿಕ ಉತ್ತಮ ನಿರ್ವಹಣೆಗಾಗಿ ಈ ಮಂಡಳಿಯ ರಚನೆ ಅಗತ್ಯ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.