ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಮೆರಿಕದ ಮಾಜಿ ಕಾಂಗ್ರೆಸ್ ಸದಸ್ಯೆ ತುಳಸಿ ಗಬ್ಬಾರ್ಡ್ ಅವರು ಬಾಂಗ್ಲಾದೇಶದ ಧಾರ್ಮಿಕ ಕಿರುಕುಳಕ್ಕೊಳಗಾದ ಹಿಂದೂ ಅಲ್ಪಸಂಖ್ಯಾತರ ಪರವಾಗಿ ಮಾತನಾಡಿದ್ದಾರೆ.
ಧಾರ್ಮಿಕ ಕಿರುಕುಳ ಘಟನೆಗಳ ಮೂಲದಲ್ಲಿರುವ ಇಸ್ಲಾಮಿಕ್ ಮೂಲಭೂತವಾದಿಗಳನ್ನು ಸೋಲಿಸಲು ವಿಶ್ವ ನಾಯಕರು ಒಗ್ಗೂಡಬೇಕೆಂದು ಅವರು ಮನವಿ ಮಾಡಿದ್ದಾರೆ.
“ಕಾಂಗ್ರೆಸ್ ಸದಸ್ಯಳಾಗಿ, ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗಾಗಿ ನಾನು ನಿರ್ಣಯವನ್ನು ಮಂಡಿಸಿದ್ದೆ. ಅಲ್ಲಿ ಇಂದಿಗೂ ಅಲ್ಪಸಂಖ್ಯಾತ ಜನರು ಕಿರುಕುಳಕ್ಕೊಳಗಾಗುತ್ತಿದ್ದಾರೆ. ಈ ಕಿರುಕುಳದ ಉತ್ತುಂಗವು 50 ವರ್ಷಗಳ ಹಿಂದೆಯೇ ಪ್ರಾರಂಭವಾಯಿತು, ಲಕ್ಷಾಂತರ ಬಂಗಾಳಿ ಹಿಂದೂಗಳನ್ನು ಅವರ ಧರ್ಮ ಮತ್ತು ಜನಾಂಗದ ಕಾರಣದಿಂದಾಗಿ ಪಾಕಿಸ್ಥಾನದ ಸೈನ್ಯವು ವ್ಯವಸ್ಥಿತವಾಗಿ ಕೊಲೆ, ಅತ್ಯಾಚಾರ ಮತ್ತು ಅವರನ್ನು ಮನೆಗಳಿಂದ ಓಡಿಸಿದ ಸಂದರ್ಭದಿಂದಲೇ ಇದು ಇದೆ ”ಎಂದು ಅವರು ಹೇಳಿದ್ದಾರೆ.
ಕಿರುಕುಳವು ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಸಂಖ್ಯೆಯನ್ನು ಹೇಗೆ ಕಡಿಮೆ ಮಾಡಿದೆ ಎಂಬುದರ ಕುರಿತು ಮಾತನಾಡಿದ ಅವರು, 1900 ರ ದಶಕದ ಆರಂಭದಲ್ಲಿ ದೇಶದಲ್ಲಿ ಹಿಂದೂಗಳ ಸಂಖ್ಯೆ ಸುಮಾರು 33 ಪ್ರತಿಶತದಷ್ಟಿತ್ತು ಆದರೆ ಇಂದು ಅದು ಕೇವಲ 8 ಪ್ರತಿಶತದಷ್ಟಿದೆ ಎಂದಿದ್ದಾರೆ.
ಇಸ್ಲಾಮಿಕ್ ಜಿಹಾದಿಗಳು ಎಲ್ಲೆಡೆ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹಿಂಸಿಸುತ್ತಿದ್ದಾರೆಂದು ಅವರು ವಿವರಿಸಿದರು.
ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಗಮನಾರ್ಹ ಜನಸಂಖ್ಯೆ ಇತ್ತು ಆದರೆ ಇಸ್ಲಾಮಿಕ್ ಮೂಲಭೂತವಾದಿಗಳು ಅವರ ಮೇಲೆ ಕೊಲೆ, ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿ ಅವರನ್ನು ನಾಶ ಮಾಡಿದರು ಎಂದಿದ್ದಾರೆ.
ಪ್ರಪಂಚದಾದ್ಯಂತದ ಇಸ್ಲಾಮಿಕ್ ಮುಲಭೂತವಾದಿಗಳನ್ನು ಸೋಲಿಸಲು ವಿಶ್ವ ನಾಯಕರು ಒಗ್ಗೂಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯನ್ನು ವಿರೋಧಿಸಿ ಮೂಲಭೂತವಾದಿಗಳು ಅನೇಕ ದೇವಾಲಯಗಳು, ರಸ್ತೆಗಳು, ಬಸ್ಸುಗಳು ಇತ್ಯಾದಿಗಳ ಮೇಲೆ ದಾಳಿ ಮಾಡಿದರು. ಈ ಘಟನೆಗಳನ್ನು ಗಬ್ಬಾರ್ಡ್ ತನ್ನ ವೀಡಿಯೊ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.