ಮಂಗಳೂರು: ಅಮೃತಸಂಜೀವಿನಿ ರಿ. ಸೇವಾಸಂಸ್ಥೆಯು ತನ್ನ ಸೇವಾ ಪಯಣದ 64 ಮಾಸಿಕ ಯೋಜನೆಗಳಲ್ಲಿ ಸಮಾಜ ಸೇವಾಸಕ್ತರಿಂದ ಧನ ಸಂಗ್ರಹಿಸಿ 6 ಅಶಕ್ತ ಕುಟುಂಬಗಳಿಗೆ ನೀಡುವ ಮೂಲಕ ಆಸರೆಯಾಗಿದೆ.
ಅಮೃತಸಂಜೀವಿನಿ ಸಂಸ್ಥೆಯು ಸಾಮಾಜಿಕ ಜಾಲತಾಣವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಂದೆ ಅಶಕ್ತರ ಸಮಸ್ಯೆಯನ್ನು ವಿವರಿಸಿ ಆ ಮೂಲಕ ಸಂಗ್ರಹಿಸಿದ ಮೊತ್ತವನ್ನು ಅಶಕ್ತರಿಗೆ ತಿಂಗಳ ಮೂರನೇ ಆದಿತ್ಯವಾರದಂದು ನೀಡಲಾಗುತ್ತದೆ. ಈ ತಿಂಗಳ ಯೋಜನೆಗೆ ಅರ್ಹವಾದ ಒಟ್ಟು ನಾಲ್ಕು ಕುಟುಂಬಗಳಿಗೆ 1,30,000 ಹಣವನ್ನು ಸಂಗ್ರಹಿಸಿ ನೀಡಿದೆ. ಈ ಮೊತ್ತವನ್ನು ಶ್ರವಣ ದೋಷ ಸಂಬಂಧಿ ಕಾಯಿಲೆಯಿಂದ ಬಲಳುತ್ತಿರುವ ಋತ್ವಿಕ್ ಗೆ ರೂ. 30,000, ಮೈಗ್ರೇನ್ ಸಮಸ್ಯೆ ಹಾಗೂ ತಲೆಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಚೆಂಬುಗುಡ್ಡೆ ಅಂಬೇಡ್ಕರ್ ನಗರ ನಿವಾಸಿ ತ್ರಿಷಾ ಅವರಿಗೆ ರೂ. 30,000, ಕಂದಾವರ ಗುರುಕುಮೇರು ನಿವಾಸಿ ಮೀರಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಪತಿಯೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಈ ಕುಟುಂಬಕ್ಕೆ ರೂ. 30,000, ಕಿಡ್ನಿ ಸಮಸ್ಯೆಯಿಂದ ಬಲಳುತ್ತಿರುವ ಕನ್ಯಾನ ನಿವಾಸಿ ವಿಟ್ಠಲ ಶೆಟ್ಟಿ ಅವರಿಗೆ ರೂ. 30,000 , ನಿಶ್ಯಕ್ತಿ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ಪವಿತ್ರ ಹಾಗೂ ಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ತಿಮ್ಮಪ್ಪ ಅವರಿಗೆ ತಲಾ ರೂ 5,000 ಧನಸಹಾಯವನ್ನು ಹಸ್ತಾಂತರಿಸಲಾಗಿದೆ.
ಅಮೃತಸಂಜೀವಿನಿ ರಿ. ಸೇವಾ ಸಂಸ್ಥೆಯು ತನ್ನ 5 ವರ್ಷಗಳ ಸೇವಾವಧಿಯಲ್ಲಿ ಈ ವರೆಗೆ ಒಟ್ಟು 91 ಲಕ್ಷಕ್ಕೂ ಹೆಚ್ಚು ಧನಸಹಾಯವನ್ನು ಅಶಕ್ತರಿಗೆ ನೀಡಿಕೊಂಡು ಬಂದಿದ್ದು, ಆ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.