ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ರನ್ವೇ ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದ್ದು ಈ ರನ್ವೇಯನ್ನು ಸೇವೆಗೆ ಮುಕ್ತಗೊಳಿಸಲಾಗಿದೆ. ಕ್ಯಾಟ್ ತ್ರಿಬಿ ನಿಯಮದಂತೆ ಈ ಕಾಂಘಾರಿಯನ್ನು ಮುಗಿಸಲಾಗಿದ್ದು, ಏಕಕಾಲಕ್ಕೆ ಎರಡು ರನ್ವೇ ಗಳನ್ನು ಬಳಸಬಹುದಾದ ಮೊದಲ ಭಾರತೀಯ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನೂ ತನ್ನ ಮುಡಿಗೇರಿಸಿಕೊಂಡಿದೆ.
ಈ ರನ್ವೇಯನ್ನು ನವೀಕರಣ ಮಾಡುವ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಇಲ್ಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಎಲ್ಇಡಿ ಸೆಂಟರ್ ಲೈನ್ ಲೈಟಿಂಗ್, ಇನ್ಸೆಟ್ ರನ್ವೇ ಎಡ್ಜ್ಲೈಟ್ ಮತ್ತು ಟ್ಯಕ್ಸಿವೇ ಸೆಂಟರ್ಲೈನ್ ಲೈಟಿಂಗ್, ಎರಡು ಹೊಸ ಮಿಡ್ ಪಾಯಿಂಟ್ ಟ್ರಾನ್ಸ್ಮಿಸೋ ಮೀಟರ್ಗಳನ್ನು ಅಳವಡಿಸಲಾಗಿದ್ದು, ಆ ಮೂಲಕ ಈ ರನ್ವೇಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆದಿದೆ. ರನ್ವೇ ಆಧುನೀಕರಣದಿಂದಾಗಿ ಇದರ ಕಾರ್ಯಕ್ಷಮತೆಯೂ ಹೆಚ್ಚಾಗಲಿದೆ. ಪ್ರತಿಕೂಲ ವಾತಾವರಣವಿದ್ದರೂ ವಿಮಾನಗಳು ಕಾರ್ಯ ನಿರ್ವಹಿಸುವುದಕ್ಕೂ ಈ ರನ್ವೇ ಪೂರಕವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ರನ್ವೇ ನಲ್ಲಿ 125 ಮೀ. ದೃಶ್ಯ ಸಾಧ್ಯತೆಯಲ್ಲಿ ವಿಮಾನ ಲ್ಯಾಂಡಿಂಗ್ ಮಾಡುವುದು ಸಾಧ್ಯವಾಗಲಿದೆ. 550 ಮೀಟರ್ ದೃಶ್ಯ ಸಾಧ್ಯತೆಯಲ್ಲಿ ವಿಮಾನಗಳನ್ನು ಟೇಕಾಫ್ ಮಾಡುವುದು ಸಹ ಸಾಧ್ಯವಾಗಲಿದೆ. ಕೊರೋನಾ ಹಿನ್ನೆಲೆ ವಿಮಾನ ಸಂಚಾರ ಕಡಿಮೆ ಇದ್ದ ಕಾರಣದಿಂದ ಈ ರನ್ವೇಯನ್ನು ಕ್ಯಾಟ್ ಒನ್ ನಿಯಮಾನುಸಾರ ಮೇಲ್ದರ್ಜೆಗೆ ಏರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.