ಬೆಂಗಳೂರು: ವಿರೋಧ ಪಕ್ಷಗಳು ಸದನವನ್ನು ರಾಜಕೀಯ ವೇದಿಕೆಯನ್ನಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಸದನದಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯಬೇಕೇ ಹೊರತು, ಸದನದಲ್ಲಿ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡಿ, ಗಲಭೆ ಸೃಷ್ಟಿಸಿ ಸಮಯವನ್ನು ವ್ಯರ್ಥ ಮಾಡುವುದು ಉತ್ತಮ ನಡೆಯಲ್ಲ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸದನಕ್ಕೆ ಸಚಿವರು ಶಾಸಕರು ಗೈರು ಹಾಜರಾಗವುದು, ಸದನದ ಕಲಾಪಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸದೇ ಇರುವುದು ವಿಷಾದದ ವಿಚಾರ. ಸದನದಲ್ಲಿ ಭಾಗವಹಿಸುವ, ಚರ್ಚೆ ನಡೆಸುವ ಬಗ್ಗೆಯೂ ಸಚಿವರ, ಶಾಸಕರ ಚಿಂತನೆ ಸಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಅಧಿವೇಶನವನ್ನು ಎರಡು ದಿನ ಮುಂಚಿತವಾಗಿಯೇ ಮುಗಿಸಲಾಗಿದೆ. ಇದಕ್ಕೆ ವಿರೋಧ ಪಕ್ಷಗಳ ಅಸಹಕಾರವೇ ಕಾರಣ ಎಂದು ಅವರು ಹೇಳಿದ್ದಾರೆ. ವರ್ಷಕ್ಕೆ 30 ರಿಂದ 40 ದಿನಗಳಷ್ಟೇ ಸದನ ನಡೆಯುತ್ತದೆ. ಇದರಲ್ಲಿ ಶಿಸ್ತಿನಲ್ಲಿ ಭಾಗವಹಿಸುವುದನ್ನು, ಶಿಸ್ತಿನ ಚರ್ಚೆಯನ್ನು ನಡೆಸುವ ಸ್ವಯಂ ಜಾಗೃತಿಯನ್ನು ಸಚಿವರು, ಶಾಸಕರುಗಳು ಬೆಳೆಸಿಕೊಳ್ಳಬೇಕಾಗಿದೆ. ಅನೇಕರ ಹೆಸರು ಹಾಜರಿ ಪಟ್ಟಿಯಲ್ಲಿ ಬಿದ್ದಿದ್ದರೂ, ಸದನದಲ್ಲಿ ಮಾತ್ರ ಅವರು ಕಾಣಿಸಿಕೊಳ್ಳದೇ ಇರುವುದು ದುರಾದೃಷ್ಟ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.