ಇಸ್ಲಾಮಾಬಾದ್: ಶತಮಾನದಷ್ಟು ಹಳೆಯದಾದ ಹಿಂದೂಗಳ ಅತೀ ಪುರಾತನ ಶ್ರದ್ಧಾ ಕೇಂದ್ರವಾಗಿದ್ದ ಕೃಷ್ಣ ದ್ವಾರ ದೇವಸ್ಥಾನವನ್ನು ಧ್ವಂಸಗೊಳಿಸಿ, ಸುಟ್ಟು ಹಾಕಿದ ಮುಸ್ಲಿಂ ಗುಂಪನ್ನು ಹಿಂದೂ ಸಮುದಾಯ ಕ್ಷಮಿಸಿದೆ.
ಪಾಕಿಸ್ಥಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಅಲ್ಪಸಂಖ್ಯಾತ ಹಿಂದೂ ಸಮುದಾಯವು ಈ ಪ್ರದೇಶದಲ್ಲಿನ ಒಂದು ಶತಮಾನದಷ್ಟು ಹಳೆಯ ಕೃಷ್ಣ ದ್ವಾರ ದೇವಾಲಯವನ್ನು ಧ್ವಂಸಗೊಳಿಸಿದ ಇಸ್ಲಾಮಿಕ್ ಭಯೋತ್ಪಾದಕರನ್ನು ಕ್ಷಮಿಸಲು ನಿರ್ಧರಿಸಿದೆ.
ದೌರ್ಜನ್ಯಕ್ಕೊಳಗಾದ ಹಿಂದೂ ಸಮುದಾಯದ ಸದಸ್ಯರು ಮತ್ತು ಪ್ರದೇಶದ ಕೆಲವು ಸ್ಥಳೀಯ ಧರ್ಮಗುರುಗಳ ನಡುವೆ ವಿವಾದ ಬಗೆಹರಿಸಲು ಸಭೆ ನಡೆಸಲಾಯಿತು. ಅನೌಪಚಾರಿಕವಾಗಿ ‘ಜಿರ್ಗಾ’ ಎಂದು ಕರೆಯಲ್ಪಡುವ ಸಮಾಲೋಚನಾ ಸಂವಾದದಲ್ಲಿ ಆರೋಪಿಗಳು ದಾಳಿಯ ಬಗ್ಗೆ ಕ್ಷಮೆಯಾಚಿಸಿದ್ದಾರೆ .
1920 ಕ್ಕಿಂತ ಮೊದಲೇ ನಿರ್ಮಿತವಾಗಿದ್ದ ಈ ದೇವಸ್ಥಾನವನ್ನು ಮುಸ್ಲಿಂ ಧರ್ಮಗುರುವಿನಿಂದ ಪ್ರಚೋದನೆಗೊಂಡ ಅಲ್ಲಿನ ಭಯೋತ್ಪಾದಕ ಗುಂಪು ದೇವಸ್ಥಾನವನ್ನು ಸುಟ್ಟು ಹಾಕುವ ಪ್ರಯತ್ನವನ್ನು ನಡೆಸಿತು. ಈ ದೇವಾಲಯವು ಕರಾಚಿಯ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಶ್ರದ್ಧೆಯ ಕೇಂದ್ರಬಿಂದುವಾಗಿತ್ತು. ಹಿಂದೂ ಸಮುದಾಯವು ಶತಮಾನದಷ್ಟು ಹಳೆಯದಾದ ದೇವಾಲಯವನ್ನು ಧ್ವಂಸಗೊಳಿಸಿದ ಆರೋಪವನ್ನು ಹಿಂತೆಗೆದುಕೊಳ್ಳಲಾಗುವುದೆಂದು ಇಲ್ಲಿನ ಹಿಂದೂಗಳು ಒಪ್ಪಿಕೊಂಡಿದ್ದಾರೆ ಮತ್ತು ಪ್ರತಿಯಾಗಿ ಮುಸ್ಲಿಂ ಧರ್ಮಗುರುಗಳು ಹಿಂದೂಗಳಿಗೆ ಸಂಪೂರ್ಣ ರಕ್ಷಣೆ ಮತ್ತು ದೇಶದ ಸಂವಿಧಾನದ ಪ್ರಕಾರ ಅವರ ಹಕ್ಕುಗಳನ್ನು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.