ಮೈಸೂರು: ಮೈಸೂರು ಮತ್ತು ಜಿಲ್ಲೆಗೆ ತಾಗಿಕೊಂಡಿರುವ ಮೂರು ಜಿಲ್ಲೆಗಳಲ್ಲಿ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 32,000 ಪಕ್ಷಿಗಳನ್ನು ಗುರುತಿಸಲಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಬಾನಾಡಿಗಳ ಸಂಖ್ಯೆ ಹೇರಳವಾಗಿರವುದು ಕಂಡಿರುವುದು ವಿಶೇಷವಾಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಬಾನಾಡಿಗಳು ಈ ಪ್ರದೇಶದಲ್ಲಿ ಪಕ್ಷಿ ಗಣತಿಗೆ ಹೊರಟ ಸಂದರ್ಭ ತಂಡಕ್ಕೆ ಕಾಣಸಿಕ್ಕಿದೆ. ಪ್ರತಿ ವರ್ಷ ಜನವರಿಯಲ್ಲಿ ಪಕ್ಷಿಪ್ರಿಯರ ತಂಡಗಳು ಮೂರು ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಪಕ್ಷಿ ಗಣತಿ ಮಾಡುತ್ತವೆ.
ಈ ಬಾರಿ ವಿಶೇಷವಾಗಿ ಒಂದೇ ದಿನ ಈ ಪಕ್ಷಿಗಳ ಗಣತಿ ಕಾರ್ಯ ನಡೆದಿದ್ದು. ನಿಖರವಾಗಿ ಪಕ್ಷಿಗಳ ಸಂಖ್ಯೆಯನ್ನು ಗುರುತಿಸಲು ವೈಜ್ಞಾನಿಕ ಮಾರ್ಗ ಆಯ್ಕೆ ಮಾಡಿಕೊಳ್ಳಲಾಯಿತು. ಮೂರು ಜಿಲ್ಲೆಗಳಲ್ಲಿ ಒಟ್ಟು 204 ಪ್ರಭೇದಗಳ 32,304 ಪಕ್ಷಿಗಳನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ವರ್ಷ ಹೆಚ್ಚು ಮಳೆ ಬಿದ್ದ ಹಿನ್ನೆಲೆಯಲ್ಲಿ ಪಕ್ಷಿಗಳ ವಲಸೆ ಪ್ರಭಾವದಿಂದಾಗಿ ಸಂಖ್ಯೆ ದೃಷ್ಟಿಯಲ್ಲಿ ಏರುಪೇರಾಗಿತ್ತು ಮತ್ತು ವಿದೇಶಿ ಪಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ.
ಕಳೆದ ವರ್ಷ ಕೇವಲ 25,107 ಹಕ್ಕಿಗಳು ಗೋಚರಿಸಿದ್ದವು. ಈ ವರ್ಷ ಕೇವಲ ಎರಡು ಪ್ರಭೇದಗಳು ಮಾತ್ರ ಹೆಚ್ಚಾಗಿ ಕಂಡರೂ, 7,197 ಹೆಚ್ಚು ಹಕ್ಕಿಗಳನ್ನು ಗುರುತಿಸಲಾಗಿದೆ. ಈ ಬೆಳವಣಿಗೆ ಪಕ್ಷಿಪ್ರಿಯರಲ್ಲಿ ಹರ್ಷ ಮೂಡಿಸಿದೆ.
ಸುತ್ತಲಿನ ಕೆರೆಗಳು ಬೇಸಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಕಡಿಮೆಯಾಗುವ ಸಂದರ್ಭ ಪಕ್ಷಿಗಳ ಇಲ್ಲಿ ನೀರಸ ಪ್ರತಿಕ್ರಿಯೆ ಇರುತ್ತದೆ.
ಎಚ್.ಡಿ.ಕೋಟೆ ರಸ್ತೆಯ ಕರಿಗಾಲದಲ್ಲಿ 1,861 ಪಕ್ಷಿಗಳು ಕಂಡುಬಂದಿವೆ. ಮೂರು ಜಿಲ್ಲೆಗಳ ಒಟ್ಟು 33 ಸ್ಪಾಟ್ಗಳಲ್ಲಿ ಅತಿ ಹೆಚ್ಚು ಪಕ್ಷಿಗಳು ಗೋಚರವಾಗಿರುವುದು ಇದೇ ಜಾಗದಲ್ಲಿ. ನಂತರ ಕಬಿನಿ ಹಿನ್ನೀರಿನಲ್ಲಿ 1,478, ಯಳಂದೂರಿನ ಇರಸವಾಡಿಯಲ್ಲಿ 958, ಮೂರ್ಕಲ್ಲುವಿನಲ್ಲಿ 839 ಪಕ್ಷಿಗಳನ್ನು ಗುರುತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.