ನವದೆಹಲಿ: ಚೆನ್ನೈ, ಬೆಂಗಳೂರು ಮತ್ತು ಸಲೇಂ ಅನ್ನು ಸಂಪರ್ಕಿಸುವ ಹೊಸ ಎಕ್ಸ್ಪ್ರೆಸ್ ವೇ ಯೋಜನೆಯನ್ನು ಯೋಜಿಸಲಾಗಿದ್ದು, ಇದು ತಮಿಳುನಾಡನ್ನು ಅಟೋಮೊಬೈಲ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಲಿದೆ ಎಂಬ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್ಎಂಇ ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.
ಮೂರು ಹಸಿರು ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ಸರ್ಕಾರ ಯೋಜಿಸಿದೆ ಎಂದು ಗಡ್ಕರಿ ಹೇಳಿದರು. ಮೊದಲನೆಯದಾಗಿ, 250 ಕಿ.ಮೀ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಯನ್ನು 10 ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ, ಅದರಲ್ಲಿ ಎಂಟಕ್ಕೆ ಬಿಡ್ಗಳನ್ನು ಸ್ವೀಕರಿಸಲಾಗಿದೆ. ಯೋಜನೆಯ ವೆಚ್ಚ ಸುಮಾರು 15,000 ಕೋಟಿ ರೂ ಆಗಿದೆ ಎಂದಿದ್ದಾರೆ.
ಎಕ್ಸ್ಪ್ರೆಸ್ವೇ ಸಿದ್ಧವಾದ ನಂತರ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಎರಡೂವರೆ ಗಂಟೆಗಳವರೆಗೆ ಕಡಿಮೆಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಎರಡನೆಯದು 277 ಕಿ.ಮೀ ಚೆನ್ನೈ-ಸೇಲಂ ಎಕ್ಸ್ಪ್ರೆಸ್ ವೇ, ಇದನ್ನು 7,500 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ” ಇದು ಎನ್ಎಚ್ಎಐ ಪರಿಸರ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿದೆ ಮತ್ತು ಅದರ ನಂತರ ಭೂಸ್ವಾಧೀನವನ್ನು ಪ್ರಾರಂಭಿಸಲಾಗುವುದು” ಎಂದು ಗಡ್ಕರಿ ಹೇಳಿದ್ದಾರೆ.
ಮೂರನೇ ಎಕ್ಸ್ಪ್ರೆಸ್ವೇ ಹೊಸದಾಗಿ ಘೋಷಿಸಲಾದ ರಾಷ್ಟ್ರೀಯ ಹೆದ್ದಾರಿ ಚಿತ್ತೂರು-ಥ್ಯಾಚರ್ ರಸ್ತೆಯಾಗಿದ್ದು, ಇದನ್ನು ಎನ್ಎಚ್ 716 ಬಿ (160 ಕಿ.ಮೀ) ಎಂದು ಹೆಸರಿಸಲಾಗಿದೆ. “ಇದು ನಗರ ಮತ್ತು ಜನ ನಿಬಿಡ ಚೆನ್ನೈ ರಸ್ತೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಇದು ಕೈಗಾರಿಕಾ ಅಭಿವೃದ್ಧಿ ಹೊಂದಿದ ಪ್ರದೇಶಗಳ ಮೂಲಕವೂ ಹಾದುಹೋಗುತ್ತದೆ ಮತ್ತು 4,000 ಕೋಟಿ ರೂ.ವೆಚ್ಚವಾಗುತ್ತದೆ ಎಂದಿದ್ದಾರೆ.
23,000 ಕೋಟಿ ರೂ.ಗಳ ವೆಚ್ಚದಲ್ಲಿ 1,100 ಕಿ.ಮೀ.ಯ 23 ಯೋಜನೆಗಳು ಪ್ರಗತಿಯಲ್ಲಿವೆ ಎಂದು ಗಡ್ಕರಿ ಹೇಳಿದರು.
ಚೆನ್ನೈ ಬಂದರು-ಮಧುರಾವೊಯಲ್ ಎಕ್ಸ್ಪ್ರೆಸ್ ವೇ ಯೋಜನೆಯನ್ನು ಲಾರ್ಸೆನ್ ಮತ್ತು ಟೌಬ್ರೊ ಮರುವಿನ್ಯಾಸಗೊಳಿಸುತ್ತಿದೆ ಮತ್ತು ಇದು ಎರಡು ಫ್ಲೈಓವರ್ಗಳನ್ನು ಹೊಂದಲಿದೆ ಹೊಸ ವಿನ್ಯಾಸವು ಒಂದು ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಗಡ್ಕರಿ ಹೇಳಿದ್ದಾರೆ.
“ನಾನು ಸಲಹೆಗಾರರೊಂದಿಗೆ ಚರ್ಚೆ ನಡೆಸಿದೆ. ಟ್ರಾಫಿಕ್ ಸ್ನಾರ್ಲ್ಸ್ ಮತ್ತು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ” ಎಂದಿದ್ದಾರೆ.
“ನಾವು ಭಾರತವನ್ನು ವಿಶ್ವದ ಪ್ರಥಮ ವಾಹನ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. ಇಲ್ಲಿ ತಮಿಳುನಾಡಿನ ಪಾತ್ರ ಬಹಳ ಮುಖ್ಯ. ಭವಿಷ್ಯದಲ್ಲಿ ಬಂದರಿಗೆ ಸಮೀಪವಿರುವ ಸ್ಕ್ರ್ಯಾಪಿಂಗ್ ಕ್ಲಸ್ಟರ್ಗಳನ್ನು ಸ್ಥಾಪಿಸಲು ನಾನು ರಾಜ್ಯ ಸರ್ಕಾರವನ್ನು ಸೂಚಿಸುತ್ತೇನೆ, ಇದರಿಂದ ಅದು ಹೆಚ್ಚಿನ ಉದ್ಯೋಗ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ, ”ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.