ಶ್ರೀನಗರ: ಭಯೋತ್ಪಾದನೆ ಮತ್ತು ಹಿಂದೂಗಳ ವಲಸೆ ಹೋಗುವಿಕೆಯಿಂದಾಗಿ 31 ವರ್ಷಗಳ ಹಿಂದೆ ಬಾಗಿಲು ಮುಚ್ಚಿದ್ದ ಶ್ರೀನಗರದ ದೇವಾಲಯವನ್ನು ಬಸಂತ್ ಪಂಚಮಿಯ ಶುಭ ಸಂದರ್ಭದಲ್ಲಿ ಮತ್ತೆ ತೆರೆಯಲಾಯಿತು.
ಶ್ರೀನಗರದ ಹಬ್ಬಾ ಕಡಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶೀತಲ್ ನಾಥ್ ದೇವಾಲಯ ಮಂಗಳವಾರ ಮತ್ತೆ ತೆರೆಯಿತು. ದೇವಾಲಯದಲ್ಲಿ ಭಕ್ತರು ವಿಶೇಷ ‘ಪೂಜೆ’ ನೆರವೇರಿಸಿದರು.
ದೇವಸ್ಥಾನವನ್ನು ಪುನಃ ತೆರೆದಿರುವುದು ಸ್ಥಳೀಯರಿಗೆ ಭಾರೀ ಸಂತೋಷ ಉಂಟು ಮಾಡಿದೆ, ವಿಶೇಷವಾಗಿ ಮುಸ್ಲಿಂ ಸಮುದಾಯದವರಿಂದಲೂ ಭಾರೀ ಬೆಂಬಲ ದೊರೆತಿದೆ ಎಂದು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಭಕ್ತ ಸಂತೋಷ್ ರಜಾದಾನ್ ಹೇಳಿದ್ದಾರೆ.
“ಶೀತಲ್ ನಾಥ್ ದೇವಸ್ಥಾನವು 31 ವರ್ಷಗಳ ನಂತರ ಮತ್ತೆ ತೆರೆಯಲ್ಪಟ್ಟಿತು. ಹಿಂದೆ ಜನರು ಪ್ರಾರ್ಥನೆ ಸಲ್ಲಿಸುವ ಮೊದಲು ಇಲ್ಲಿಗೆ ಬರುತ್ತಿದ್ದರು ಆದರೆ ಉಗ್ರಗಾಮಿತ್ವದಿಂದಾಗಿ ಅದನ್ನು ಮುಚ್ಚಲಾಯಿತು. ದೇವಾಲಯದ ಬಳಿ ವಾಸಿಸುತ್ತಿದ್ದ ಹಿಂದೂಗಳು ಸಹ ಹೊರಟು ಹೋಗಿದ್ದರು. ಹೆಚ್ಚಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಥಳೀಯರು ನಮಗೆ ಸಹಾಯ ಮಾಡಿದರು” ಎಂದು ಅವರು ತಿಳಿಸಿದ್ದಾಋೆ.
ಶೀತಲ್ ನಾಥ್ ದೇವಸ್ಥಾನದಲ್ಲಿ ನಡೆಸಿದ ಪೂಜೆಯ ಸಂಘಟಕರಲ್ಲಿ ಒಬ್ಬರಾದ ರವೀಂದರ್ ರಜ್ದಾನ್, ಮುಸ್ಲಿಂ ಸಮುದಾಯದ ಜನರು ಈ ಉಪಕ್ರಮದಲ್ಲಿ ನಮಗೆ ಹೆಚ್ಚು ಅಗತ್ಯವಾದ ಬೆಂಬಲವನ್ನು ನೀಡಿದರು ಮತ್ತು ಅವರು ದೇವಾಲಯವನ್ನು ಸ್ವಚ್ಛಗೊಳಿಸಲು ಕೂಡ ಸಹಾಯ ಮಾಡಿದರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.