ನವದೆಹಲಿ: ಪಾಕಿಸ್ಥಾನದಲ್ಲಿ ಹಿಂದೂ ದೇವಾಲಯಗಳನ್ನು ನಾಶಪಡಿಸುವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನೀಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಆದರೂ ಅಲ್ಲಿನ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಕಾಳಜಿಯಿಲ್ಲ. ಅಲ್ಲಿನ ಸಚಿವರು ಗಳೇ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.
ಪಾಕಿಸ್ಥಾನದ ವಿದೇಶಾಂಗ ಸಚಿವ ಸೋಮನಾಥ ದೇವಾಲಯವನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಮೊಹಮ್ಮದ್ ಘಜ್ನಿಯಂತೆ ಪಾಕ್ ವಿದೇಶಾಂಗ ಶಾಂತಿ ಮೆಹಮೂದ್ ಖುರೇಷಿ ಸೋಮನಾಥ ದೇವಾಲಯವನ್ನು ನಾಶಮಾಡಲು ಮುಂದಾಗಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಆತನ ಈ ಪ್ರತಿಜ್ಞೆಗೆ ಜನಸಮೂಹವು ಹರ್ಷೋದ್ಗಾರ ಹಾಕಿದ್ದು ಪಾಕ್ ಜನರ ಮತಾಂಧತೆಯನ್ನು ಎತ್ತಿ ತೋರಿಸುತ್ತದೆ.
ಈ ವೀಡಿಯೊ ಕನಿಷ್ಠ ಒಂದು ದಶಕದಷ್ಟು ಹಳೆಯದಾಗಿದೆ. ಖುರೇಷಿಯ ಈ ಭಾಷಣದ ನಿಖರವಾದ ಸಮಯ ತಿಳಿದು ಬಂದಿಲ್ಲ.
ಮೊಹಮ್ಮದ್ ಘಜ್ನಿ 10 ನೇ ಶತಮಾನದ ತುರ್ಕಿಕ್ ರಾಜವಂಶದ ಮುಸ್ಲಿಂ ಆಕ್ರಮಣಕಾರನಾಗಿದ್ದು, ಗುಜರಾತಿನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ್ದ. ಆತ ಜ್ಯೋತಿರ್ಲಿಂಗವನ್ನು ಕೂಡ ಭಗ್ನ ಮಾಡಿದ್ದ ಮತ್ತು ದೇವಾಲಯವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಸಾವಿರಾರು ಭಕ್ತರನ್ನು ಕೊಂದುಹಾಕಿದ್ದಾನೆ ಎಂದು ಹೇಳಲಾಗಿದೆ.
ಭಾರತದ ಸಂಪತ್ತಿನಿಂದ ಆಕರ್ಷಿತನಾದ ಆತ 17 ಬಾರಿ ಭಾರತದ ಮೇಲೆ ದಾಳಿ ನಡೆಸಿ ಲೂಟಿ ಮಾಡಿದ್ದಾನೆ ಎಂದು ನಂಬಲಾಗಿದೆ. ಸೋಮನಾಥ ದೇವಾಲಯವನ್ನು ಹೊರತುಪಡಿಸಿ, ಅವನು ಕಾಂಗ್ರಾ, ಮಥುರಾ ಮತ್ತು ಜ್ವಾಲಾಮುಖಿ ದೇವಾಲಯಗಳನ್ನು ನಾಶಪಡಿಸಿದ್ದಾನೆಂದು ನಂಬಲಾಗಿದೆ. ಈ ಕಾರಣದಿಂದಾಗಿ, ಅವನನ್ನು ಸ್ವತಃ ‘ಐಡಲ್ ಬ್ರೇಕರ್’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.