ನವದೆಹಲಿ: ಹಿಂದಿನ ದಶಕಕ್ಕೆ ಹೋಲಿಸಿದರೆ ಕಳೆದ ಆರು ವರ್ಷಗಳಲ್ಲಿ ರೈತರು ಸರ್ಕಾರದ ಖರೀದಿಯಿಂದ ಹೆಚ್ಚು ಆದಾಯ ಗಳಿಸಿದ್ದಾರೆ. ಯಾಕೆಂದರೆ ಮೋದಿ ಆಡಳಿತವು ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ಪಿ) ಹೆಚ್ಚಳ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“2004-05 ರಿಂದ 2013-14ರವರೆಗಿನ ಎಲ್ಲಾ ಬೆಳೆಗಳಿಗೆ ಎಂಎಸ್ಪಿಯಲ್ಲಿ ಸರಾಸರಿ ವಾರ್ಷಿಕ ಹೆಚ್ಚಳ 9% ಆಗಿತ್ತು, ಆದರೆ ವಾರ್ಷಿಕ 8% ದರದಲ್ಲಿ ಏರಿಕೆಯನ್ನು ಕಂಡಿದ್ದ ಆಹಾರ ಧಾನ್ಯಗಳ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ)ದಿಂದಾಗಿದೆ ಲಾಭಗಳು ಬಹುತೇಕ ತಟಸ್ಥಗೊಂಡವು” ಎಂದಿದ್ದಾರೆ. “ಎಂಎಸ್ಪಿಯಿಂದ ಡಬ್ಲ್ಯೂಪಿಐ (ಆಹಾರ ಧಾನ್ಯಗಳು)ವರೆಗೆ ಸರಾಸರಿ ಅಂಶವು 1.09 ಆಗಿತ್ತು” ಎಂದಿದ್ದಾರೆ.
2014-15ರಿಂದ ಪ್ರಸಕ್ತ ಹಣಕಾಸು ವರ್ಷದ ನವೆಂಬರ್ ವರೆಗೆ ಆಹಾರ ಧಾನ್ಯಗಳ ಸರಾಸರಿ ವಾರ್ಷಿಕ ಹಣದುಬ್ಬರವು ಕೇವಲ 4% ರಷ್ಟಿದ್ದರೆ, ಎಲ್ಲಾ ಬೆಳೆಗಳಿಗೆ ಎಂಎಸ್ಪಿ 8% ರಷ್ಟು ಬೆಳೆದಿದೆ, ಇದು ಯುಪಿಎ ದಶಕಕ್ಕೆ ಹೋಲಿಸಿದರೆ ರೈತರಿಗೆ ಉತ್ತಮ ಲಾಭ ನೀಡುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
2004-05 ರಿಂದ 2013-14ರ ಅವಧಿಯಲ್ಲಿ ಎಂಎಸ್ಪಿ ಬಹುತೇಕ ಆಹಾರ ಹಣದುಬ್ಬರ (ಡಬ್ಲ್ಯುಪಿಐ-ಆಹಾರ ಧಾನ್ಯಗಳು) ಗೆ ಸಮನಾಗಿತ್ತು. ಆದರೆ 2014-15 ರಿಂದ 2020-21ರ ಅವಧಿಯಲ್ಲಿ ಎಂಎಸ್ಪಿ ದರ ಹೆಚ್ಚಳವು ದ್ವಿಗುಣವಾಗಿದೆ. ಆಹಾರ ಧಾನ್ಯಗಳ ಡಬ್ಲ್ಯುಪಿಐ ಹೆಚ್ಚಳವು ರೈತರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ, ”ಎಂದು ಅವರು ಹೇಳಿದ್ದಾರೆ.
2014 ರಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರ್ಕಾರ ಗೋಧಿ ಮತ್ತು ಭತ್ತದ ಖರೀದಿ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.