ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದೊಳಗೆ 27 ಹಿಂದೂ ಮತ್ತು ಜೈನ ದೇವಾಲಯಗಳು ಮತ್ತು ವಿಗ್ರಹಗಳನ್ನು ಪುನಃಸ್ಥಾಪಿಸಬೇಕೆಂದು ಕೋರಿ ಸಿವಿಲ್ ಮೊಕದ್ದಮೆ ಹೂಡಲಾಗಿದೆ. ಇಲ್ಲಿನ ದೇಗುಲಗಳನ್ನು 1191 ADಯಲ್ಲಿ ಧ್ವಂಸಗೊಳಿಸಲಾಗಿದೆ ಎಂದು ಹೇಳಲಾಗಿದೆ.
ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೊಕದ್ದಮೆಯ ಪ್ರಕಾರ, ಮೇರು ಧ್ವಜ್ ಪ್ರಾಂತದಲ್ಲಿ ವಿಷ್ಣು, ಶಿವ, ಗಣೇಶ, ಸೂರ್ಯ, ದೇವತೆ ಗೌರಿ ಮತ್ತು ಜೈನ ತೀರ್ಥಂಕರರ 27 ದೇವಾಲಯಗಳಿವೆ, ಇದನ್ನು ಈಗ ಕುತುಬ್ ಮಿನಾರ್ ಎಂದು ಕರೆಯಲಾಗುತ್ತದೆ.
“ಇತಿಹಾಸಕಾರರ ಪ್ರಕಾರ, ಮೊಹಮ್ಮದ್ ಗೋರಿ 1191 ರಲ್ಲಿ ನಡೆದ ಯುದ್ಧದಲ್ಲಿ ಪೃಥ್ವಿ ರಾಜ್ ಚೌಹಾನ್ ಅವರನ್ನು ಸೋಲಿಸಿದ ಮತ್ತು ನಂತರ ಜನರಲ್ ಕುತುಬ್ಡಿನ್ ಐಬಾಕ್ ದೇವಾಲಯದ ಸಂಕೀರ್ಣದಲ್ಲಿದ್ದ ದೇವಾಲಯಗಳನ್ನು ನೆಲಸಮ ಮಾಡಿದ ಮತ್ತು ದೇವಾಲಯಗಳ ಕಟ್ಟಡ ಸಾಮಗ್ರಿಗಳನ್ನು ಬಳಸಿ ಇಸ್ಲಾಂ ಧರ್ಮದ ಶಕ್ತಿಯನ್ನು ತೋರಿಸಲು ಇಲ್ಲಿ ನಿರ್ಮಾಣವನ್ನು ಮಾಡಿದ. ಈ ನಿರ್ಮಾಣವನ್ನು ಕ್ವಾವಾತುಲ್ ಇಸ್ಲಾಂ ಮಸೀದಿ ಎಂದು ಕರೆಯಲಾಗಿದೆ” ಎಂದು ಅರ್ಜಿದಾರರು ಹೇಳಿದ್ದಾರೆ.
ಕುತುಬುದ್ದೀನ್ ಐಬಾಕ್ಗೆ ದೇವಾಲಯಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲು ಸಾಧ್ಯವಾಗಿಲ್ಲ, ಹಿಂದೂ ದೇವರುಗಳಾದ ಗಣೇಶ, ವಿಷ್ಣು, ಯಕ್ಷದಂತಹ ದೇವತೆಗಳ ಚಿತ್ರಗಳು ಮತ್ತು ಕಲಶ, ದೇವಾಲಯದ ಬಾವಿಗಳು ಮತ್ತು ಪವಿತ್ರವಾದ ಚಿಹ್ನೆಗಳು ಇನ್ನೂ ಇವೆ ಎಂದಿದ್ದಾರೆ.
ಈ ಅರ್ಜಿಯ ವಿಚಾರಣೆ ಡಿಸೆಂಬರ್ 24 ರಂದು ಸಿವಿಲ್ ನ್ಯಾಯಾಧೀಶ ನೇಹಾ ಶರ್ಮಾ ಅವರ ಮುಂದೆ ವಿಚಾರಣೆಗೆ ಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.