ವಾಷಿಂಗ್ಟನ್: ಬಾಲ್ಯದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕೇಳುತ್ತಾ ಬೆಳೆದೆ, ಹೀಗಾಗಿ ನನ್ನ ಜೀವನದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಇಂಡೋನೇಷಿಯಾದಲ್ಲಿ ಬಾಲ್ಯವನ್ನು ಕಳೆದ ಅವರು, ಅಲ್ಲಿ ಹಿಂದೂ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಕೇಳುತ್ತಾ ಬೆಳೆದಿದ್ದಾರೆ ಎಂದು ಹೇಳಲಾಗಿದೆ.
“ಭಾರತ ವಿಶಾಲವಾದ ರಾಷ್ಟ್ರ, ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿದೆ. ಅಂದಾಜು 2000 ವಿಭಿನ್ನ ಜನಾಂಗಗಳನ್ನು ಹೊಂದಿದೆ. ಇನ್ನೂರಕ್ಕೂ ಅಧಿಕ ಭಾಷೆಗಳನ್ನು ಹೊಂದಿದೆ” ಎಂದು ಭಾರತದ ಮೇಲಿನ ತಮ್ಮ ಒಲವನ್ನು ಅವರು ತಮ್ಮ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ.
2010ರಲ್ಲಿ ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾಗುವುದಕ್ಕೂ ಮುನ್ನ ಭಾರತಕ್ಕೆ ನಾನು ಭೇಟಿ ನೀಡಿರಲಿಲ್ಲ, ಆದರೂ ನನ್ನ ಕಲ್ಪನೆಯಲ್ಲಿ ಭಾರತಕ್ಕೆ ಅತ್ಯಂತ ವಿಶೇಷ ಸ್ಥಾನವಿತ್ತು ಎಂದಿದ್ದಾರೆ.
“ಇದಕ್ಕೆ ಕಾರಣ, ನಾನು ಇಂಡೋನೇಷ್ಯಾದಲ್ಲಿ ಬಾಲ್ಯವನ್ನು ಹಿಂದೂ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣವನ್ನು ಕೇಳುತ್ತಾ ಬೆಳೆದಿದ್ದು, ಪೂರ್ವದ ಧರ್ಮಗಳ ಬಗ್ಗೆ ನನ್ನ ಆಸಕ್ತಿ ಅಥವಾ ನನಗೆ ದಾಲ್ ಮತ್ತು ಕೀಮಾ ಮಾಡಲು ಕಳುಹಿಸಿದ ಮತ್ತು ಬಾಲಿವುಡ್ ಸಿನಿಮಾ ನೋಡುವಂತೆ ಮಾಡಿದ ನನ್ನ ಭಾರತ ಮತ್ತು ಪಾಕಿಸ್ಥಾನದ ಸ್ನೇಹಿತರು ಇರಬಹುದು” ಎಂದಿದ್ದಾರೆ.
ತಮ್ಮ ‘ಪ್ರಾಮಿಸ್ಡ್ ಲ್ಯಾಂಡ್’ ಎಂಬ ಆತ್ಮಚರಿತ್ರೆಯಲ್ಲಿ ಒಬಾಮಾ ಅವರು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಬರೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.