ನ್ಯೂಯಾರ್ಕ್: ವಿಶ್ವ ಸಂಸ್ಥೆಯ ಫಸ್ಟ್ ಕಮಿಟಿಯು, ಉಗ್ರ ನಿಗ್ರಹಕ್ಕೆ ಸಂಬಂಧಿಸಿದಂತೆ ಇರುವ ಭಾರತ ಸಲ್ಲಿಸಿದ ವಾರ್ಷಿಕ ನಿರ್ಣಯವನ್ನು ಒಮ್ಮತದಿಂದ ಅಂಗೀಕಾರ ಮಾಡಿದೆ.
ಈ ಸಂಬಂಧ ಮಾತನಾಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ, ಸುಮಾರು 75 ಕ್ಕೂ ಅಧಿಕ ರಾಷ್ಟ್ರಗಳು ಭಾರತದ ಈ ನಿರ್ಣಯವನ್ನು ಪ್ರಾಯೋಜಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಭಾರತ ಉಗ್ರ ದಮನದ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಈ ನಿಲುವಿಗೆ ಪೂರಕವಾಗಿ ಜಾಗತಿಕವಾಗಿ ನಾಶ ಮತ್ತು ನಷ್ಟಕ್ಕೆ ಕಾರಣವಾಗುವ ಶಸ್ತ್ರಾಸ್ತ್ರಗಳು ಉಗ್ರಗಾಮಿಗಳ ಕೈ ಸೇರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಭಾರತ ಮಂಡಿಸಿತ್ತು. ಈ ನಿರ್ಣಯಕ್ಕೆ ಫಸ್ಟ್ ಕಮಿಟಿ ಒಮ್ಮತದ ಒಪ್ಪಿಗೆ ನೀಡಿದ್ದರೆ, 75 ಕ್ಕೂ ಅಧಿಕ ರಾಷ್ಟ್ರಗಳು ಭಾರತದ ಈ ನಿಲುವಿಗೆ ಬೆಂಬಲ ಸೂಚಿಸಿವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ನಿರ್ಣಯಕ್ಕೆ ಪೂರಕವಾಗುವಂತೆ ಸರ್ಕಾರ ಮಾನ್ಯತೆ ನೀಡಿದ ಸಂಸ್ಥೆಗಳ ಹೊರತಾಗಿ ಅನ್ಯರು ರಾಸಾಯನಿಕ ವಸ್ತುಗಳನ್ನು, ಅಣ್ವಸ್ತ್ರ, ಜೈವಿಕ ಅಸ್ತ್ರಗಳನ್ನು ಉತ್ಪಾದನೆ ಮಾಡುವುದು, ಮಾರಾಟ ಮಾಡಲು ಅನುಮತಿ ಇರಬಾರದು. ಇಂತಹ ಶಸ್ತ್ರಗಳು ಉಗ್ರಗಾಮಿಗಳ ಕೈ ಸೇರುವುದು ಮತ್ತು ಆಪತ್ತಿಗೆ ಆಹ್ವಾನ ನೀಡುವುದು ಎರಡೂ ಒಂದೇ. ಇದು ಅನಾಹುತಕ್ಕೆ ದಾರಿಯಾಗಬಹುದು ಎಂದು ಭಾರತ ತನ್ನ ವಾರ್ಷಿಕ ನಿರ್ಣಯದಲ್ಲಿ ತಿಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.