ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ನ ತಪಸ್ ಯೋಜನೆಯ ಅಡಿಯಲ್ಲಿ ಉಚಿತ ಶಿಕ್ಷಣ ಪಡೆದ 14 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಈ ವ್ಯವಸ್ಥೆಯಡಿ ಉಚಿತ ಅಧ್ಯಯನ ನಡೆಸಿದ್ದ 32 ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಜೆಇಇ ಅಡ್ವಾನ್ಸ್ಡ್ ನಲ್ಲಿಯೂ ತೇರ್ಗಡೆಯಾಗಿದ್ದಾರೆ. ಈ ಪೈಕಿ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅವಕಾಶ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳು ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಭದ್ರತಾ ಸಿಬ್ಬಂದಿ, ಹೌಸ್ ಕೀಪಿಂಗ್, ರೈತರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಇನ್ನೂ ಅನೇಕ ರೀತಿಯ ಕೆಲಸ ಮಾಡುವ ಬಡ ವರ್ಗಗಳಿಗೆ ಸೇರಿದವರಾಗಿದ್ದಾರೆ. ಇಂತಹ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆ ಮತ್ತು ಬೇಸ್ ಸಂಸ್ಥೆಯು ಉಚಿತ ವಸತಿ, ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡುತ್ತಿದ್ದು, ಈ ವಿದ್ಯಾರ್ಥಿಗಳೂ ಇದರಿಂದ ಉಪಯೋಗ ಪಡೆದವರಾಗಿದ್ದಾರೆ ಎಂದು ಪರಿಷತ್ನ ಪ್ರಧಾನ ಕಾರ್ಯದರ್ಶಿ ಆ. ದಿನೇಶ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಪೃಥ್ವಿರಾಜ್, ನವೀನ್ ಗೌಡ, ಸಾತ್ವಿಕ್, ಭವನ್, ಸಂಗ್ರಾಮ್ ಸಿಂಗ್ ಪಾಟೀಲ್, ರಾಹುಲ್, ಆದಿತ್ಯರಾಮ್ ಹೆಗ್ಡೆ, ಉಲ್ಲಾಸ್, ಕೆ. ಚೇತನ್ ಕುಮಾರ್, ಆಶಿಸ್ ಅರಕುಣಿ, ವಿವೇಕ್, ನೀಲಕಂಠ ಚೌಹಾಣ್ , ಶಶಾಂಕ್, ಬಾಳಪ್ಪ ಭಜಂತ್ರಿ ಎಂಬ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ತೇರ್ಗಡೆ ಹೊಂದಿ ಐಐಟಿ ಪ್ರವೇಶ ಪಡೆದ ಸಾಧಕರಾಗಿದ್ದಾರೆ. ತಪಸ್ ಯೋಜನೆ 2012 ರಲ್ಲಿ ಆರಂಭವಾಗಿದ್ದು, ಈ ವರೆಗೆ 7 ತಂಡಗಳಲ್ಲಿ ಸುಮಾರು 284 ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ
Rashtrotthana Parishat’s #TAPAS Project successful in sending 14 rural talents to IIT this year, who cleared JEE Advanced Exams. TAPAS is an educational project to empower Meritorious Underprivileged Students from Rural Villages of Karnataka. pic.twitter.com/7xm8Fvt4IQ
— Rashtrotthana Parishat (@Rashtrotthana_P) October 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.