ನಾಯ್ಪಿಡಾವ್ (ಮ್ಯಾನ್ಮಾರ್): ನೆರೆಯ ಸ್ನೇಹಿತ ಮಯನ್ಮಾರ್ಗೆ ಕೋವಿಡ್-19 ವಿರುದ್ಧ ಹೋರಾಡಲು ಭಾರತ ಸಹಾಯವನ್ನು ಮಾಡುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರು ಸೋಮವಾರ 3000 ಬಾಟಲುಗಳ ರೆಮ್ಡೆಸಿವಿರ್ ಔಷಧವನ್ನು ಆ ದೇಶಕ್ಕೆ ಹಸ್ತಾಂತರ ಮಾಡಿದರು.
ಶ್ರೀಂಗ್ಲಾ ಮತ್ತು ನಾರವಾನೆ ಅವರು ಎರಡು ದಿನಗಳ ಮಯನ್ಮಾರ್ ಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ಅಕ್ಟೋಬರ್ 4ರಂದು ಮಯನ್ಮಾರ್ ಮುಖ್ಯಸ್ಥೆ ಆಂಗ್ ಸಾಂಗ್ ಸೂಕಿ ಅವರಿಗೆ ರೆಮ್ಡೆಸಿವಿರ್ ಅನ್ನು ಹಸ್ತಾಂತರ ಮಾಡಿದ್ದಾರೆ.
“ಪ್ರಸ್ತುತ ಕೋವಿಡ್-19 ಪರಿಸ್ಥಿತಿಯಿಂದಾಗಿ, ಎರಡು ದೇಶಗಳ ನಡುವೆ ಕೆಲವು ನೇರ ವಿನಿಮಯಗಳು ನಡೆದಿವೆ. ಈ ಭೇಟಿಯು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಂಬಂಧಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಅವಕಾಶವನ್ನು ಒದಗಿಸುತ್ತದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತವು ತನ್ನ ‘ನೆರೆಹೊರೆ ಪ್ರಥಮ’ ಮತ್ತು ‘ಆಕ್ಟ್ ಈಸ್ಟ್’ ನೀತಿಗಳಿಗೆ ಅನುಗುಣವಾಗಿ ಮಯನ್ಮಾರ್ನೊಂದಿಗಿನ ಸಂಬಂಧಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಸಚಿವಾಲಯ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ, ಸಂಪರ್ಕ ಮತ್ತು ವ್ಯಾಪಾರ, ಅಭಿವೃದ್ಧಿ ಯೋಜನೆಗಳು, ಇಂಧನ, ಸಾಮರ್ಥ್ಯ ವೃದ್ಧಿ, ರಕ್ಷಣಾ ಮತ್ತು ಭದ್ರತೆ ಮತ್ತು ಸಂಸ್ಕೃತಿ ಮತ್ತು ಜನರಿಂದ ಜನರ ಸಂಪರ್ಕಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎರಡೂ ಕಡೆಯವರು ತಮ್ಮ ಸಹಕಾರವನ್ನು ಬಲಪಡಿಸಿದ್ದಾರೆ.
🇮🇳 India Myanmar 🇲🇲
As part of India’s contribution to help a friendly neighbour Myanmar fight against COVID-19, Foreign Secretary @harshvshringla & COAS handed over 3000 vials of #Remdesivir to State Counsellor H.E. Daw Aung San Suu Kyi @MOFAMyanmar @ambsaurabhkumar@MyanmarSC pic.twitter.com/KyLS9mx9Hz— India in Myanmar (@IndiainMyanmar) October 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.