ನವದೆಹಲಿ: ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಟೆಕ್ಸ್ಟೈಲ್ ವಲಯ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರೆಲೇಶನ್ಸ್ ಆಯೋಜನೆಗೊಳಿಸಿದ ಟೆಕ್ಸ್ಟೈಲ್ ಟ್ರೆಡೀಷನ್ ಎಂಬ ಅಂತರರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರರಿಗೆ ವಿಶ್ವದರ್ಜೆಯ ಉತ್ಪನ್ನಗಳನ್ನು ತಯಾರಿಸಲು ಸಹಾಯವನ್ನು ಮುಂದುವರೆಸುವಂತೆ ಮನವಿ ಮಾಡಿದರು. ಅಲ್ಲದೇ, ಜಾಗತಿಕ ಮಟ್ಟದ ಅತ್ಯುತ್ತಮ ರೂಢಿಗಳನ್ನು ನಾವು ಅಳವಡಿಸಿಕೊಳ್ಳಬೇಕು ಮತ್ತು ಅತ್ಯುತ್ತಮ ಉತ್ಪನ್ನಗಳನ್ನು ಹೊರತರಬೇಕು ಎಂದಿದ್ದಾರೆ.
ಈ ವೆಬ್ನಾರ್ನಲ್ಲಿ ವಿನಿಮಯವಾದ ವಿಚಾರಗಳು ಉತ್ತಮ ಅಭ್ಯಾಸಗಳ ಸಹಯೋಗಕ್ಕೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು. ಜವಳಿ ಕ್ಷೇತ್ರವು ಯಾವಾಗಲೂ ಅವಕಾಶಗಳನ್ನು ಹೊತ್ತುಕೊಂಡೇ ಇರುತ್ತದೆ ಮತ್ತು ದೇಶೀಯವಾಗಿ, ಈ ವಲಯವು ಭಾರತದ ಅತಿ ಹೆಚ್ಚು ಉದ್ಯೋಗ ಒದಗಿಸುವ ವಲಯವಾಗಿದೆ ಎಂದು ಮೋದಿ ಹೇಳಿದರು.
ಪ್ರಪಂಚದಾದ್ಯಂತ, ಜವಳಿ ಕ್ಷೇತ್ರವು ಅನೇಕ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡಿದೆ ಮತ್ತು ಆದ್ದರಿಂದ, ಜವಳಿ ಕ್ಷೇತ್ರವು ಮಹಿಳಾ ಸಬಲೀಕರಣದ ಪ್ರಯತ್ನಗಳಿಗೆ ಬಲವನ್ನು ನೀಡುತ್ತದೆ ಎಂದು ಮೋದಿ ಹೇಳಿದರು.
ಈ ಸವಾಲಿನ ಕಾಲದಲ್ಲಿ ನಮ್ಮ ಭವಿಷ್ಯಕ್ಕಾಗಿ ನಾವು ತಯಾರಿ ನಡೆಸಬೇಕಾಗಿದೆ ಎಂದು ಅವರು, ದೇಶದ ಜವಳಿ ಸಂಪ್ರದಾಯಗಳು ವೈವಿಧ್ಯತೆ ಮತ್ತು ಹೊಂದಿಕೊಳ್ಳುವಿಕೆ, ಸ್ವಾವಲಂಬನೆ, ಕೌಶಲ್ಯ ಮತ್ತು ನಾವೀನ್ಯತೆಯಂತಹ ಪ್ರಬಲ ವಿಚಾರಗಳು ಮತ್ತು ತತ್ವಗಳನ್ನು ಪ್ರದರ್ಶಿಸಿವೆ ಮತ್ತು ಈ ತತ್ವಗಳು ಈಗ ಇನ್ನಷ್ಟು ಪ್ರಸ್ತುತವಾಗಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.