ಲಡಾಖ್: ಕೊರೋನಾ ಸಂಕಷ್ಟದ ನಡುವೆಯೇ ಕಳೆದ ಜೂನ್ ತಿಂಗಳಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ನರಿಬುದ್ಧಿಯ ಸಂಘರ್ಷಕ್ಕೆ 20 ಮಂದಿ ಭಾರತೀಯ ಯೋಧರು ವೀರ ಮರಣವನ್ನಪ್ಪಿ ಹುತಾತ್ಮರಾಗಿದ್ದರು. ಈ ಹುತಾತ್ಮ ಯೋಧರ ಸವಿನೆನಪಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.
ಲಡಾಖ್ನ ಧರ್ಬುಕ್- ಶ್ಯೋಕ್- ದೌಲತ್ ಬೇಗ್ ಓಲ್ಡೀ ರಸ್ತೆಯ ಕೆಎಂ-120 ಪೋಸ್ಟ್ ಬಳಿಯಲ್ಲಿ ಭಾರತೀಯ ಸೇನೆ ಹುತಾತ್ಮ ಯೋಧರ ಗೌರವಾರ್ಥ ಈ ಸ್ಮಾರಕವನ್ನು ನಿರ್ಮಿಸಿದೆ.
ಕಳೆದ ಜೂನ್ 15 ರಂದು ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅವರ ನೇತೃತ್ವದ ಭಾರತೀಯ ಯೋಧರು, ಗಾಲ್ವಾನ್ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಜೊತೆಗೆ ಹೋರಾಡಿತ್ತು. ಈ ಸಂದರ್ಭದಲ್ಲಿ ಎರಡೂ ಸೈನ್ಯದ ನಡುವೆ ಕೈ-ಕೈ ಮಿಲಾಯಿಸಿ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಭಾರತದ 20 ಯೋಧರು ವೀರ ಸ್ವರ್ಗ ಸೇರಿದ್ದರು. ಜೊತೆಗೆ ಚೀನಾದ ಅನೇಕ ಸೈನಿಕರೂ ಮೃತಪಟ್ಟಿದ್ದರು. ಇದೀಗ ಭಾರತ ತನ್ನ ವೀರ ಯೋಧರನ್ನು ಸದಾ ಕಾಲ ಸ್ಮರಿಸಲು ಸಹಾಯಕ ಎಂಬಂತೆ, ಅವರ ಗೌರವಾರ್ಥ ಸ್ಮಾರಕ ನಿರ್ಮಾಣ ಮಾಡಿದೆ.
ಈ ಸ್ಮಾರಕದಲ್ಲಿ ಆಪರೇಷನ್ ಸ್ನೋ ಲೆಪರ್ಡ್ನ ಸಂಪೂರ್ಣ ಮಾಹಿತಿಯನ್ನು ಸ್ಮಾರಕದ ಬಳಿ ಕಲ್ಲಿನಲ್ಲಿ ಕೆತ್ತಲಾಗಿದೆ. ಇನ್ನೊಂದು ಕಲ್ಲಿನಲ್ಲಿ ಈ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಮತ್ತು ಅವರು ಕಾರ್ಯ ನಿರ್ವಹಿಸುತ್ತಿದ್ದ ರೆಜಿಮೆಂಟ್ಗಳ ಮಾಹಿತಿಯನ್ನು ಕೆತ್ತಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.