ನವದೆಹಲಿ: ಸ್ವಚ್ಛ ಭಾರತ ಪ್ರಶಸ್ತಿ -2020 ಅನ್ನು ಇಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಗಳು, ಜಿಲ್ಲೆಗಳು, ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿಗಳಿಗೆ ನೀಡಿದರು. ವಿಶೇಷವಾಗಿ ಕುಡಿಯುವ ನೀರು ಮತ್ತು ಸ್ವಚ್ಛತೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.
ಕೇಂದ್ರ ಸರ್ಕಾರ ಈ ಹಿಂದೆ ಸ್ವಚ್ಛ ಸುಂದರ ಸಮುದಾಯ ಶೌಚಾಲಯ, ಸಮುದಾಯ ಶೌಚಾಲಯ ಅಭಿಯಾನ ಮತ್ತು ಕೊಳಚೆ ಮುಕ್ತ ಭಾರತದ ಅಡಿಯಲ್ಲಿ ಮೂರು ಕಾರ್ಯಗಳನ್ನು ಪ್ರಾರಂಭಿಸಿತ್ತು. ಸ್ವಚ್ಛ ಸುಂದರ ಸಮುದಾಯಿಕ ಶೌಚಾಲಯ ವಿಭಾಗದಲ್ಲಿ ಗುಜರಾತ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾ ಮಟ್ಟದಲ್ಲಿ ಸ್ವಚ್ಛತೆಗಾಗಿ ಪ್ರಶಸ್ತಿ ಪಡೆದುಕೊಂಡಿದೆ.
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಖಕ್ರೋಡ್ ಬ್ಲಾಕ್ಗೆ ಪ್ರಥಮ ಸ್ಥಾನ ಮತ್ತು ತಮಿಳುನಾಡಿನ ಚಿನ್ನನೂರು ಗ್ರಾಮಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಗ್ರ ಸ್ಥಾನ ದೊರೆತಿದೆ. ಸಮುದಾಯಿಕ ಶೌಚಾಲಯ ಅಭಿಯಾನದ ಅಡಿಯಲ್ಲಿ, ಗುಜರಾತ್ ಮತ್ತು ಉತ್ತರ ಪ್ರದೇಶವನ್ನು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿ ಪರಿಗಣಿಸಲಾಗಿದೆ, ಪ್ರಯಾಗ್ರಾಜ್ ಮತ್ತು ಬರೇಲಿ ಅತ್ಯುತ್ತಮ ಪ್ರದರ್ಶನ ನೀಡುವ ಜಿಲ್ಲೆಗಳಾಗಿವೆ. ಕೊಳಚೆ ಮುಕ್ತ ಭಾರತ ಮಿಷನ್ ಅಡಿಯಲ್ಲಿ ಹರಿಯಾಣ ಮತ್ತು ತೆಲಂಗಾಣಕ್ಕೆ ಅಗ್ರ ಸ್ಥಾನ ನೀಡಲಾಗಿದೆ.
ದೇಶದಲ್ಲಿ ಬಯಲು ಮಲವಿಸರ್ಜನೆ ಮುಕ್ತ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಶೇಖಾವತ್ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಎಲ್ಲರಿಗೂ ಸುರಕ್ಷಿತ ನೈರ್ಮಲ್ಯದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಮುದಾಯ ನೈರ್ಮಲ್ಯ ಸಂಕೀರ್ಣಗಳನ್ನು ನಿರ್ಮಿಸಲು ವಿಶೇಷ ಕಾಳಜಿ ವಹಿಸಲಾಗುವುದು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.