ನವದೆಹಲಿ: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನ ವಿಧಿವಿಜ್ಞಾನ ಇಲಾಖೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐಗೆ ತನ್ನ ವರದಿಯನ್ನು ಸಲ್ಲಿಸಿದ್ದು, ಶವಪರೀಕ್ಷೆಯ ವರದಿಯಲ್ಲಿ ಸಾವಿನ ಸಮಯವನ್ನು ಉಲ್ಲೇಖ ಮಾಡದೇ ಇರುವ ಬಗ್ಗೆ ಪ್ರಶ್ನೆ ಎತ್ತಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಶವಪರೀಕ್ಷೆ ನಡೆದ ಕೂಪರ್ ಆಸ್ಪತ್ರೆಯ ಡಿಮ್ ಲೈಟ್ ಪೋಸ್ಟ್ ಮಾರ್ಟಮ್ ರೂಮ್ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದೆ.
ಆದರೆ ಸುಶಾಂತ್ ಸಾವಿನಲ್ಲಿ ವಿಷ ಪ್ರಾಶಣದ ಆಯಾಮವನ್ನು ಮೂಲಗಳು ತಳ್ಳಿ ಹಾಕಿವೆ.
ಡಾ.ಸುಧೀರ್ ಗುಪ್ತಾ ಅವರ ಅಧ್ಯಕ್ಷತೆಯ ವಿಧಿವಿಜ್ಞಾನ ಮಂಡಳಿಯು ತನ್ನ ನಿರ್ಣಾಯಕ ವರದಿಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಸಲ್ಲಿಸಿದೆ ಎಂದು ಏಮ್ಸ್ ಮೂಲವೊಂದು ತಿಳಿಸಿದೆ.
ಏಜೆನ್ಸಿಗೆ ಸಲ್ಲಿಸಿದ ನಿರ್ಣಾಯಕ ವರದಿಯಲ್ಲಿ, ಕೂಪರ್ ಆಸ್ಪತ್ರೆಯ ಮರಣೋತ್ತರ ಕೋಣೆಯಲ್ಲಿ ಮಂದ ಬೆಳಕಿನ ಬಗ್ಗೆ ವೈದ್ಯರು ಗಮನ ಸೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ 14 ರ ರಾತ್ರಿ ಕೂಪರ್ ಆಸ್ಪತ್ರೆಯ ಮೂವರು ವೈದ್ಯರು ಸುಶಾಂತ್ ಅವರ ಶವಪರೀಕ್ಷೆಯನ್ನು ನಡೆಸಿದ್ದರು. ಶವಪರೀಕ್ಷೆಯ ವರದಿಯಲ್ಲಿ ಸಾವಿನ ಸಮಯ ಇಲ್ಲದೇ ಇರುವ ಬಗ್ಗೆ ವರದಿಯು ಅಚ್ಚರಿ ವ್ಯಕ್ತಪಡಿಸಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.