ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ವಿದ್ಯಾರ್ಥಿನಿ ಕೇರಳ ಮೂಲದ ಯಮುನಾ ಮೆನನ್ ಅವರಿಗೆ ಕಾನೂನು ಪದವಿಯಲ್ಲಿ 18 ಚಿನ್ನದ ಪದಕಗಳು ಲಭಿಸಿವೆ. ಕಳೆದ ಭಾನುವಾರ ನಡೆದ ವಿವಿಯ 28 ನೇ ಘಟಿಕೋತ್ಸವದ ಸಂದರ್ಭದಲ್ಲಿ ಈ ಪದಕಗಳು ಯಮುನಾ ಮುಡಿಗೇರಿವೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಇತಿಹಾಸದಲ್ಲೇ ಈ ಸಾಧನೆ ಮೊದಲು ಎನ್ನಲಾಗಿದೆ.
ಈ ಸಂಬಂಧ ಸಂತಸ ವ್ಯಕ್ತಪಡಿಸಿರುವ ಯಮುನಾ ಅವರು, ತಾವು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ನ ವಕೀಲ ಜೋಸೆಫ್ ಅವರ ಮಾತುಗಳನ್ನು ಕೇಳಿದ್ದೆ. ಮುಂದೆ ಇದೇ ನನಗೆ ಕಾನೂನು ಪದವಿ ಅಧ್ಯಯನಕ್ಕೆ ಪ್ರೇರಣೆಯಾಯಿತು ಎಂದು ಅವರು ತಿಳಿಸಿದ್ದಾರೆ. ಸ್ವಲ್ಪ ಸಮಯ ಅವರಿಗೆ ಕಂಪ್ಯೂಟರ್ ಸಂಬಂಧಿಸಿದಂತೆ ತಾಂತ್ರಿಕ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಈ ಸಂದರ್ಭದಲ್ಲಿ ಜೋಸೆಫ್ ಅವರು ಕೋರ್ಟ್ನಲ್ಲಿ ತಮ್ಮ ವಾದದ ಸಂದರ್ಭದಲ್ಲಿನ ರೋಚಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಇದನ್ನು ಕೇಳುತ್ತಾ ತನಗೆ ಕಾನೂನು ಪದವಿ ಪಡೆಯುವ ಮನಸ್ಸಾಯಿತು ಎಂದು ತಿಳಿಸಿದ್ದಾರೆ.
ಕೇರಳದ ಕೊಚ್ಚಿಯ ಉದಯಂಪುರ ಮೂಲದವರಾದ ಯಮುನಾ 2014 ರಲ್ಲಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ ಮೂಲಕ ಕಾನೂನು ವಿವಿ ಸೇರಲು ಬಯಸಿದ್ದರು. ಆಗ ಅವಕಾಶ ಒದಗಿರಲಿಲ್ಲ. ಬಳಿಕ 2015 ರಲ್ಲಿ ಕ್ಲಾಟ್ ಪರೀಕ್ಷೆಯಲ್ಲಿ 28 ನೇ ರ್ಯಾಂಕ್ ಪಡೆದು ವಿವಿಗೆ ಕಾನೂನು ಅಧ್ಯಯನಕ್ಕೆ ಸೇರಿಕೊಂಡಿದ್ದರು. ಸದ್ಯ 18 ಚಿನ್ನದ ಪದಕ ಗಳಿಸಿ ಬಂಗಾರದ ಹುಡುಗಿಯಾಗಿರುವ ಯಮುನಾ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಇವರ ಸಾಧನೆಯ ಕಾರಣಕ್ಕೆ ಆಕ್ಸ್ಫರ್ಡ್ ಮತ್ತು ಟ್ರಿನಿಟಿ ವಿವಿಗಳು ವಿದ್ಯಾರ್ಥಿ ವೇತನ ನೀಡಲು ಮುಂದೆ ಬಂದಿವೆ ಎಂದು ಅವರು ತಿಳಿಸಿದ್ದಾರೆ. ಈ ಪೈಕಿ ಟ್ರಿನಿಟಿ ಕಾಲೇಜಿನಲ್ಲಿ ಅಧ್ಯಯನ ನಡೆಸುವ ಬಗ್ಗೆಯೂ ಅವರು ಆಸಕ್ತಿ ಹೊಂದಿದ್ದಾರೆ. ಅಲ್ಲಿ ಶಿಕ್ಷಣ ಮುಗಿಸಿದ ಬಳಿಕ ದೇಶಕ್ಕೆ ಹಿಂತಿರುಗಿ ಇಲ್ಲೇ ಕಾರ್ಯ ನಿರ್ವಹಿಸುವ ಇರಾದೆಯನ್ನೂ ಯಮುನಾ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.