ಬೆಂಗಳೂರು: ರಾಷ್ಟ್ರೀಯ ಮಾನವ ಹಕ್ಕುಗಳ ತಜ್ಞರ ಸಮಿತಿ ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮಗಳು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಅಧ್ಯಯನ ನಡೆಸಿದೆ.
ಈ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳಿಗೂ ವರದಿ ಸಲ್ಲಿಸಿರುವ ಆಯೋಗ, ಸಿರಿಧಾನ್ಯ, ರಾಗಿ, ಖಾದ್ಯ ತೈಲ ಇತ್ಯಾದಿ ಅಗತ್ಯ ವಸ್ತುಗಳನ್ನು ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡುವಂತೆಯೂ ಸಲಹೆ ನೀಡಿದೆ. ಕೊರೋನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಂಗನವಾಡಿಗಳನ್ನು ಆರಂಭ ಮಾಡುವುದು, ಮಹಿಳಾ ಮತ್ತು ಮಕ್ಕಳ ಕಾಳಜಿ, ಆಹಾರ, ಆರೋಗ್ಯ, ಶಿಕ್ಷಣ, ಮಕ್ಕಳ ಹಕ್ಕುಗಳ ರಕ್ಷಣೆ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆಯೂ ಆಯೋಗ ಈ ವರದಿಯಲ್ಲಿ ಶಿಫಾರಸ್ಸು ಮಾಡಿದೆ.
ದೇಶದ ದುರ್ಬಲ, ಬಡ ವರ್ಗ, ವಲಸಿಗರು, ದಿನಗೂಲಿ ನೌಕರರು, ವಿಕಲಾಂಗ ಚೇತನರು ಸೇರಿದಂತೆ ಇನ್ನಿತರ ವರ್ಗದ ಮೇಲೆ ಕೊರೋನಾ ಕರಿನೆರಳು ಬಿದ್ದಿದೆ. ಅಲ್ಲದೆ ಪೌಷ್ಟಿಕ ಆಹಾರ, ಆರೋಗ್ಯ, ಶಿಕ್ಷಣ, ರಕ್ಷಣೆ, ನ್ಯಾಯಯುತ ಸೇವೆಗಳಲ್ಲಿಯೂ ಕೊರೋನಾ ವ್ಯತ್ಯಯವಾಗುವಂತೆ ಮಾಡಿದೆ. ಯುನಿಸೆಫ್ ವರದಿಯಂತೆ 6.4 ಕೋಟಿ ಮಕ್ಕಳು ಅಂಗನವಾಡಿ ಸೇವೆ ಸ್ಥಗಿತವಾದ್ದರಿಂದ ಆಹಾರ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಜೊತೆಗೆ ಸೈಬರ್ ಕ್ರೈಂ, ಮಾನವ ಕಳ್ಳಸಾಗಾಣೆ, ಮಕ್ಕಳ ಕಳ್ಳಸಾಗಾಣೆ, ದೌರ್ಜನ್ಯ ಮೊದಲಾದ ಅಪರಾಧಗಳೂ ಹೆಚ್ಚಾಗುತ್ತಿದ್ದು ಇದಕ್ಕಾಗಿ ಕಾನೂನುಗಳ ಬಲವರ್ಧನೆ, ಇಂತಹ ಸಮಸ್ಯೆಗಳ ನಿಗ್ರಹಕ್ಕೆ ಹೊಸ ಘಟಕಗಳನ್ನು ಸ್ಥಾಪಿಸುವುದಕ್ಕೂ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.