ನವದೆಹಲಿ: ಈಶಾನ್ಯ ಪ್ರದೇಶಗಳಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮೂಲಭೂತವಾದಿ ನಾಗಾ ಸಂಘಟನೆ ನ್ಯಾಷನಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್-ಖಪ್ಲಾಂಗ್ (ಎನ್ಎಸ್ಸಿಎನ್-ಕೆ) ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದೆ.
ನಿಷೇಧವನ್ನು ವಿಸ್ತರಿಸುವ ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಇಂಡೋ-ಮ್ಯಾನ್ಮಾರ್ ಪ್ರದೇಶದ ನಾಗಾ ಪ್ರದೇಶಗಳನ್ನು ಪ್ರತ್ಯೇಕಗೊಳಿಸಿ ಆ ಮೂಲಕ ಸಾರ್ವಭೌಮ ನಾಗಾಲ್ಯಾಂಡ್ ರಚಿಸುವ ಕಾರ್ಯಸೂಚಿಯನ್ನು ಎನ್ಎಸ್ಸಿಎನ್-ಕೆ ಸಂಘಟನೆ ಮುಂದುವರಿಸಿದೆ.
ಎನ್ಎಸ್ಸಿಎನ್-ಕೆ ಭಾರತ ಸರ್ಕಾರದ ಅಧಿಕಾರವನ್ನು ಮತ್ತು ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಸರ್ಕಾರಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜನರಲ್ಲಿ ಭಯೋತ್ಪಾದನೆ ಮತ್ತು ಭೀತಿಯನ್ನು ಹರಡುತ್ತದೆ ಎಂದು ಅಧಿಸೂಚನೆಯು ಒತ್ತಿ ಹೇಳಿದೆ.
75 ನಾಗರಿಕರನ್ನು ಅಪಹರಿಸುವುದರ ಹೊರತಾಗಿ, ಏಳು ಭದ್ರತಾ ಸಿಬ್ಬಂದಿ ಮತ್ತು ಆರು ನಾಗರಿಕರ ಸಾವಿಗೆ ಕಾರಣವಾದ 104 ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾದ ಈ ಸಂಘಟನೆಯ ನಿಷೇಧವನ್ನು ವಿಸ್ತರಿಸುವುದು ಅತ್ಯಗತ್ಯ ಎಂದು ಗೃಹ ಸಚಿವಾಲಯ ಅಭಿಪ್ರಾಯಿಸಿದೆ.
ಮಣಿಪುರದಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ ನಂತರ ಎಂಎಚ್ಎ 2015 ರಲ್ಲಿ ಮೊದಲ ಬಾರಿಗೆ ಈ ಸಂಘಟನೆಯನ್ನು ನಿಷೇಧಿಸಿತ್ತು. ಈ ಸಂಘಟನೆ ನಡೆಸಿದ ದಾಳಿಯ ಪರಿಣಾಮವಾಗಿ 18 ಸೈನಿಕರು ಹುತಾತ್ಮರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.