ನವದೆಹಲಿ: ಕಪ್ಪು ಹಣವನ್ನು ಗಳಿಸುವ ಮತ್ತೊಂದು ಮಾರ್ಗವೂ ಮುಚ್ಚಿಹೋಯಿತು ಎನ್ನುವ ಕಾರಣಕ್ಕೆ ಕೆಲವರು ಇತ್ತೀಚಿಗೆ ಜಾರಿಗೆ ತಂದ ರೈತ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಲವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಗೊಂದಲವನ್ನು ಹರಡುತ್ತಿದ್ದಾರೆ. ದೇಶದಲ್ಲಿ ಎಂಎಸ್ಪಿ ಕೂಡ ಇರುತ್ತದೆ ಮತ್ತು ರೈತನು ದೇಶದ ಎಲ್ಲಿಯಾದರೂ ತನ್ನ ಬೆಳೆಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಆದರೆ ಕೆಲವು ಜನರಿಗೆ ಈ ಸ್ವಾತಂತ್ರ್ಯವನ್ನು ಸಹಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ವಿಶ್ವ ಯೋಗ ದಿನವನ್ನು ಆಚರಿಸಿದಾಗಲೂ ಈ ಜನರು ಅದನ್ನು ವಿರೋಧಿಸಿದರು, ಏಕತಾ ಪ್ರತಿಮೆ ನಿರ್ಮಾಣವಾದಾಗಲೂ ವಿರೋಧಿಸಿದರು. ಅವರೇ ಇಂದು ರೈತ ಮಸೂದೆಯನ್ನೂ ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.
ಉತ್ತರಾಖಂಡದಲ್ಲಿ ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಜಾರಿಗೊಳಿಸಲಾದ ಹಲವಾರು ಬೃಹತ್ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಗಂಗೆಯು ದೇಶದ ಅರ್ಧದಷ್ಟು ಜನಸಂಖ್ಯೆಗೆ ಸಮೃದ್ಧಿಯನ್ನು ತರುತ್ತದೆ. ಹೀಗಾಗಿ ಗಂಗಾ ನೀರಿನ ತಡೆರಹಿತ ಹರಿಯುವಿಕೆ ಮತ್ತು ಶುದ್ಧತೆ ಅತ್ಯಗತ್ಯವಾಗಿದೆ. ಹಿಂದೆ ಇದ್ದ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿದ್ದರೆ ಈಗಲೂ ಗಂಗಾನದಿ ಶುದ್ಧ ವಾಗುತ್ತಿರಲಿಲ್ಲ” ಎಂದಿದ್ದಾರೆ.
“ನಮ್ಮ ಸರಕಾರವು ಹೊಸ ಚಿಂತನೆ ಮತ್ತು ಹೊಸ ವಿಧಾನಗಳೊಂದಿಗೆ ಮುನ್ನುಗ್ಗಿತು. ನಾವು ಕೇವಲ ಗಂಗಾನದಿಯ ಶುದ್ಧತೆಯತ್ತ ಮಾತ್ರವಲ್ಲ , ದೇಶದ ಅತಿ ದೊಡ್ಡ ನದಿ ಸಂರಕ್ಷಣಾ ಯೋಜನೆಯನ್ನೂ ನಾವು ತಂದಿದ್ದೇವೆ” ಎಂದಿದ್ದಾರೆ.
ಪ್ರಸ್ತುತ ನಮಾಮಿ ಗಂಗೆ ಮಿಷನ್ ಅಡಿಯಲ್ಲಿ 30,000 ಕೋಟಿ ರೂ. ಮೌಲ್ಯದ ಯೋಜನೆಗಳು ಪೂರ್ಣಗೊಂಡಿವೆ ಅಥವಾ ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.