ನವದೆಹಲಿ: ಉತ್ತರಾಖಂಡದಲ್ಲಿ ಸರ್ಕಾರದ “ನಮಾಮಿ ಗಂಗೆ ಮಿಷನ್” ಅಡಿಯಲ್ಲಿ ಪೂರ್ಣಗೊಂಡ ಹಲವಾರು ಯೋಜನೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಉದ್ಘಾಟನೆಯಾಗುವ ಯೋಜನೆಗಳಲ್ಲಿ ಹೊಸ 68 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ)ಗಳ ನಿರ್ಮಾಣ, ಹರಿದ್ವಾರದ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ 27 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕದ ಅಪ್ಗ್ರೇಡ್, ಮತ್ತು ಹರಿದ್ವಾರದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ 18 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ ಸೇರಿವೆ.
ಇವುಗಳ ಜೊತೆಗೆ, ರಿಷಿಕೇಶದ ಲಕ್ಕಡ್ಘಾಟ್ನಲ್ಲಿ 26 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕವನ್ನೂ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೆ, ಚೋರ್ಪಾನಿಯಲ್ಲಿ 5 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ ಉದ್ಘಾಟಿಸಲಾಗುತ್ತಿದೆ ಮತ್ತು ಬದ್ರಿನಾಥದಲ್ಲಿ 1 ಎಂಎಲ್ಡಿ ಮತ್ತು 0.01 ಎಂಎಲ್ಡಿ ಸಾಮರ್ಥ್ಯ ಹೊಂದಿರುವ ಎರಡು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಉದ್ಘಾಟಿಸಲಾತ್ತಿದೆ.
ಪ್ರಧಾನ ಮಂತ್ರಿಗಳ ಕಚೇರಿಯ ಬಿಡುಗಡೆಯ ಪ್ರಕಾರ, ಗಂಗಾ ಹರಿವಿನ ಸಮೀಪವಿರುವ 17 ಪಟ್ಟಣಗಳಲ್ಲಿ ಹೊರಹೊಮ್ಮುವ ನದಿ ಮಾಲಿನ್ಯವನ್ನು ಪರಿಹರಿಸಲು ಒಟ್ಟು 30 ಯೋಜನೆಗಳು ಈಗ ಉತ್ತರಾಖಂಡದಲ್ಲಿ ಪೂರ್ಣಗೊಂಡಿವೆ. ಇದು ನಿಜಕ್ಕೂ ಹೆಗ್ಗುರುತು ಸಾಧನೆ ಎಂದು ಅದು ಬಣ್ಣಿಸಿದೆ.
ಇದಲ್ಲದೆ, ಮೋದಿ ಅವರು ಗಂಗಾ ತಟದಲ್ಲಿ ಮೊಟ್ಟಮೊದಲ ಬಾರಿಗೆ ‘ಗಂಗಾ ಅವಲೋಕನ್’ ಎಂಬ ಮ್ಯೂಸಿಯಂ ಅನ್ನು ಉದ್ಘಾಟಿಸಲಿದ್ದಾರೆ. ಹರಿದ್ವಾರದ ಚಾಂಡಿ ಘಾಟ್ನಲ್ಲಿರುವ ಈ ಮ್ಯೂಸಿಯಂ ನದಿಯಲ್ಲಿನ ಸಂಸ್ಕೃತಿ, ಜೀವವೈವಿಧ್ಯತೆ ಮತ್ತು ನದಿಯ ಪುನರುಜ್ಜೀವನ ಚಟುವಟಿಕೆಗಳನ್ನು ಪ್ರದರ್ಶಿಸುವ ಸಲುವಾಗಿ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.