ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಹಿಂದೂ ದೇಗುಲಗಳ ಮೇಲಿನ ದಾಳಿ ಮುಂದುವರೆದಿದೆ. ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಮಂಡಲದ ಅಗರ ಮಂಗಳಂ ಗ್ರಾಮದ ದೇಗುಲದ ಮೇಲೆ ಭಾನುವಾರ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ವರದಿಗಳ ಪ್ರಕಾರ, ದೇಗುಲದಲ್ಲಿನ ನಂದಿ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ವರ್ಷ ಆಂಧ್ರಪ್ರದೇಶದ ಹಲವಾರು ದೇಗುಲಗಳ ಮೇಲೆ ದಾಳಿ ನಡೆದಿದೆ. ಈ ಕಾರಣದಿಂದಾಗಿ ಹಲವಾರು ಬಾರಿ ಭಕ್ತಾದಿಗಳು ಬೀದಿಯಲ್ಲಿ ನಿಂತು ಪ್ರತಿಭಟನೆಗಳನ್ನು ನಡೆಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಗೋದಾವರಿಯ ಪ್ರಸಿದ್ಧ ತೀರ್ಥ ಕ್ಷೇತ್ರ ಅಂತರ್ವೇದಿಯಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವರ ರಥವನ್ನು ಸುಟ್ಟು ಹಾಕಲಾಗಿತ್ತು. ನೆಲ್ಲೂರು ಜಿಲ್ಲೆಯ ಪ್ರಸನ್ನ ವೆಂಕಟೇಶ್ವರ ದೇಗುಲದ ರಥವನ್ನು ಕೂಡ ಸುಟ್ಟು ಹಾಕಿದ ಘಟನೆ ನಡೆದಿದೆ.
ಕೆಲವು ತಿಂಗಳುಗಳ ಹಿಂದೆ ಗುಂಟೂರು ಜಿಲ್ಲೆಯಲ್ಲಿನ ಶ್ರೀವೇಣುಗೋಪಾಲಸ್ವಾಮಿ ದೇಗುಲದ ಪ್ರತಿಮೆಗಳನ್ನು ಭಗ್ನ ಗೊಳಿಸಲಾಗಿತ್ತು. ಜನವರಿಯಲ್ಲಿ ದುಷ್ಕರ್ಮಿಗಳು ಪೂರ್ವ ಗೋದಾವರಿ ಜಿಲ್ಲೆಯ ಪಿತಪುರಂ ನಗರದಲ್ಲಿನ ದೇವಾಲಯಗಳಲ್ಲಿನ ಹಿಂದೂ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ್ದರು. ಮಾತ್ರವಲ್ಲ ಹಿಂದೂ ದೇವರ ಚಿತ್ರಗಳು ಇದ್ದ ಬ್ಯಾನರ್ಗೆ ಬೆಂಕಿ ಹಚ್ಚಿದ್ದರು.
ಮಾರ್ಚ್ 2019 ರಲ್ಲಿ, ಆಂಧ್ರಪ್ರದೇಶದ ಪೂರ್ವ ಗೋಧಾವರಿ ಜಿಲ್ಲೆಯ ಕಾಕಿನಾಡ ಗ್ರಾಮೀಣ ಮಂಡಳಿಯ ಸೂರ್ಯರಪೇಟದಲ್ಲಿರುವ ಎರಡು ಹಳೆಯ ಹಿಂದೂ ದೇವಾಲಯಗಳನ್ನು ಜೆಸಿಬಿ ಯಂತ್ರ ಬಳಸಿ ಹತ್ತಿರದ ಚರ್ಚ್ನ ಪಾದ್ರಿಯೊಬ್ಬರು ಕೆಡವಿದ್ದರು. ಅವರು ದೇವಾಲಯದ ಪ್ರಧಾನ ದೇವತೆಯ ಪುರಾತನ ವಿಗ್ರಹಗಳನ್ನು ಭಗ್ನ ಮಾಡಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 16 ರಂದು ವಿಜಯವಾಡದ ಕನಕ ದುರ್ಗಾ ದೇವಸ್ಥಾನದಲ್ಲಿ ಮೂರು ಬೆಳ್ಳಿ ಸಿಂಹ ಪ್ರತಿಮೆಗಳನ್ನು ಕಳವು ಮಾಡಲಾಗಿದೆ. ಸೆಪ್ಟೆಂಬರ್ 17 ರಂದು, ಯಲೇಶ್ವರಂನಲ್ಲಿ ಹನುಮಾನ್ ವಿಗ್ರಹವನ್ನು ಧ್ವಂಸ ಮಾಡಲಾಗಿತ್ತು.
ಒಟ್ಟಾರೆಯಾಗಿ ಈ ಘಟನೆಗಳು ಆಂಧ್ರದಲ್ಲಿ ಹಿಂದೂ ದೇಗುಲಗಳಿಗೆ ರಕ್ಷಣೆ ಇಲ್ಲ ಎಂಬುದನ್ನು ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.