ಬೆಂಗಳೂರು: ಪ್ರವಾಸೋದ್ಯಮ ನೀತಿ 2020-25 ಪ್ರವಾಸೋದ್ಯಮ ದಿನದಂದೇ ರಾಜ್ಯದಲ್ಲಿ ಜಾರಿಗೆ ಬಂದಿದೆ.
ಈ ನೀತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿವರ ಸಹಿತ ನಿನ್ನೆ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಲ್ಯಾಂಡ್ ಬ್ಯಾಂಕ್ ಸ್ಥಾಪನೆ, ಗುತ್ತಿಗೆ ಆಧಾರದಲ್ಲಿ ಹೂಡಿಕೆದಾರರಿಗೆ ಜಮೀನು ನೀಡುವ ಮೂಲಕ ಸುಮಾರು 10 ಲಕ್ಷಗಳಷ್ಟು ಉದ್ಯೋಗವನ್ನು ಕೇವಲ 5 ವರ್ಷಗಳಲ್ಲಿ ಸೃಷ್ಟಿ ಮಾಡುವ ಗುರಿಯನ್ನು ಈ ನೀತಿ ಹೊಂದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಕರ್ನಾಟಕದ ಎಂಟು ಜಿಲ್ಲೆಗಳಿಗೆ ಸಂಬಂಧಿಸಿದಂತೆ 70 ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ, ಸುಮಾರು 26 ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು, ವಿವಿಧ ಶುಲ್ಕಗಳ ರಿಯಾಯಿತಿ ಸೇರಿದಂತೆ ಸಂಪರ್ಕ, ಸೌಲಭ್ಯ, ಆಕರ್ಷಣೆ , ಚಟುವಟಿಕೆ, ವಾಸ್ತವ್ಯ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಈ ನೀತಿಯನ್ನು ರೂಪಿಸಲಾಗಿದೆ. 500 ಕೋಟಿ ರೂ. ಸಹಾಯ ಧನ ನೀಡುವ ಮೂಲಕ ಹೂಡಿಕೆದಾರರಿಗೆ ಉತ್ತೇಜಿಸಿ, 5000 ಕೋಟಿಗಳಷ್ಟು ಹೂಡಿಕೆ ನಡೆಯುವಂತೆಯೂ ಈ ನೀತಿಯನ್ನು ರೂಪಿಸಲಾಗಿದೆ.
ಈ ಸಂಬಂಧ ರಿಯಾಯಿತಿಗಳನ್ನು ನೀಡಲು ರಾಜ್ಯ, ಜಿಲ್ಲಾ ಮಟ್ಟದ ಪ್ರತ್ಯೇಕ ಸಮಿತಿಗಳನ್ನು ರೂಪಿಸಲಾಗುವುದು. ಜೊತೆಗೆ ಪ್ರವಾಸಿ ತಾಣಗಳಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ 1 ಲಕ್ಷ ರೂ. ನೆರವು, ಮೂಲ ಸೌಕರ್ಯ ಅಭಿವೃದ್ಧಿಗೆ ವಾರ್ಷಿಕ 7.5 ಲಕ್ಷ ನೆರವು ನೀಡುವ ಕುರಿತಾಗಿಯೂ ಈ ನೀತಿಯಲ್ಲಿ ಉಲ್ಲೇಖವಿದೆ. ಮಹಿಳೆಯರಿಗೆ 5% ಹೆಚ್ಚುವರಿ ಪ್ರೋತ್ಸಾಹ ಧನ ದೊರಕಲಿದೆ ಎಂದೂ ಸರ್ಕಾರ ಈ ಬಗ್ಗೆ ತಿಳಿಸಿದೆ.
"ಕರ್ನಾಟಕ ಪ್ರವಾಸೋದ್ಯಮ ನೀತಿ 2020-25" ಅನ್ನು ಮುಖ್ಯಮಂತ್ರಿ @BSYBJP ರವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಪ್ರವಾಸೋದ್ಯಮ ಸಚಿವ @CTRavi_BJP, ಕಂದಾಯ ಸಚಿವ @RAshokaBJP, ವಿಧಾನಪರಿಷತ್ ಸದಸ್ಯ @YAN_MLC, ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷೆ ಶ್ರುತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/f0y8myb00C
— CM of Karnataka (@CMofKarnataka) September 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.