ನವದೆಹಲಿ: ಭಾರತ ಮತ್ತು ಚೀನಾವು ಗಡಿ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತಿದ್ದರೂ ಕೂಡ, ಎಲ್ಎಸಿ ಸಮೀಪ ಉಭಯ ರಾಷ್ಟ್ರಗಳು ತಮ್ಮ ತಮ್ಮ ಸೈನ್ಯವನ್ನು ಪೂರ್ವ ಲಡಾಖ್ ಬಳಿಯ ಪ್ರದೇಶದಲ್ಲಿ ನಿಯೋಜನೆಗೊಳಿಸುವುದನ್ನು ಮುಂದುವರೆಸಿವೆ.
ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿರುವಂತೆ, ಕೇಂದ್ರವು ಇಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಭಾರತೀಯ ಸೇನಾ ಟ್ಯಾಂಕ್ಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳನ್ನು ಪೂರ್ವ ಲಡಾಖ್ನ ಫಾರ್ವರ್ಡ್ ಸ್ಥಳಗಳಲ್ಲಿ ನಿಯೋಜಿಸುತ್ತಿರುವುದು ಸ್ಪಷ್ಟವಾಗಿದೆ.
ಚುಮರ್-ಡೆಮ್ಚಾಕ್ನಲ್ಲಿ ಟಿ -90 ಟ್ಯಾಂಕ್ಗಳು ಮತ್ತು ಬಿಎಂಪಿ ವಾಹನಗಳ ಸಾಲುಗಳನ್ನು ಈ ವೀಡಿಯೊದಲ್ಲಿ ಕಾಣಬಹುದಾಗಿದೆ. ಇಡೀ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಲು ಸೇನೆಯು ನಿರ್ಧರಿಸಿದೆ ಎಂದು ಹೇಳಲಾಗಿದೆ.
14 ಕಾಪ್ಸ್ ಸೇನೆಯ ಮುಖ್ಯಸ್ಥ ಮೇಜರ್ ಜನರಲ್ ಅರವಿಂದ ಕಪೂರ್ ಅವರು ಹೇಳುವಂತೆ, ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾಪ್ಸ್ ಮಾತ್ರ ಇಷ್ಟೊಂದು ಕಠಿಣ ಭೂಪ್ರದೇಶದಲ್ಲಿ ಯಾಂತ್ರೀಕೃತ ಪಡೆಯನ್ನು ನಿಯೋಜಿಸಿದ ಸೇನೆಯ ರಚನೆಯಾಗಿದೆ ಮತ್ತು ಬಹುಶಃ ಜಗತ್ತಿನಲ್ಲಿ ಕೂಡ ಇದು ಒಂದೇ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಫೈರ್ ಅಂಡ್ ಫ್ಯೂರಿ ಕಾಪ್ಸ್ ಇಂತಹ ಕಠಿಣ ಭೂಪ್ರದೇಶಗಳಲ್ಲಿ ಯಾಂತ್ರಿಕೃತ ಪಡೆಗಳನ್ನು ನಿಯೋಜಿಸಿದ ಭಾರತೀಯ ಸೈನ್ಯದ ಏಕೈಕ ರಚನೆಯಾಗಿದೆ ಮತ್ತು ಪ್ರಪಂಚದ ಕೂಡ ಏಕೈಕ ರಚನೆಯಾಗಿದೆ. ಟ್ಯಾಂಕ್, ಕಾಲಾಳುಪಡೆ ಯುದ್ಧ ವಾಹನಗಳು ಮತ್ತು ಭಾರೀ ಬಂದೂಕುಗಳ ನಿರ್ವಹಣೆ ಈ ಭೂಪ್ರದೇಶದಲ್ಲಿ ಒಂದು ಸವಾಲಾಗಿದೆ ” ಎಂದು ಅವರು ಹೇಳಿದ್ದಾರೆ.
“ಲಡಾಖ್ನಲ್ಲಿ ಚಳಿಗಾಲವು ಕಠಿಣವಾಗಲಿದೆ. ಚಳಿಗಾಲದ ಸುಧಾರಿತ ದಾಸ್ತಾನು ವಿಷಯದಲ್ಲಿ ನಾವು ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದೇವೆ. ಹೆಚ್ಚಿನ ಕ್ಯಾಲೋರಿ ಮತ್ತು ಪೌಷ್ಟಿಕತೆಯಿಂದ ಕೂಡಿದ ಪಡಿತರ, ಇಂಧನ ಮತ್ತು ತೈಲ, ಚಳಿಗಾಲದ ಬಟ್ಟೆ ಮತ್ತು ತಾಪನ ಉಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ.” ಎಂದಿದ್ದಾರೆ.
ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಪಡೆಗಳು ಎಲ್ಎಸಿಯಲ್ಲಿ ಭಾರತದ ಪ್ರದೇಶಕ್ಕೆ ನುಗ್ಗಿದರೆ ತನ್ನ ಸೈನಿಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸುತ್ತಾರೆ ಎಂದು ಭಾರತ ಚೀನಾಗೆ ಎಚ್ಚರಿಕೆ ನೀಡಿದೆ ಎಂದು ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.
ಆದರೂ, ಭಾರತವು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಸಿದ್ಧವಾಗಿದೆ ಮತ್ತು ಚೀನಾದ ಕಡೆಯವರು “ನಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು” ಬಯಸುತ್ತದೆ ಎಂಬುದನ್ನು ಭಾರತ ಸ್ಪಷ್ಟವಾಗಿ ತಿಳಿಸಿದೆ.
#WATCH Indian Army deploys T-90 & T-72 tanks along with BMP-2 Infantry Combat Vehicles that can operate at temperatures up to minus 40 degree Celsius, near Line of Actual Control in Chumar-Demchok area in Eastern Ladakh.
Note: All visuals cleared by competent authority on ground pic.twitter.com/RiRBv4sMud
— ANI (@ANI) September 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.