ನವದೆಹಲಿ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 113 ನೇ ಜನ್ಮ ದಿನಾಚರಣೆಯಾದ ಇಂದು ರಾಷ್ಟ್ರವು ಅವರಿಗೆ ಗೌರವ ಸಲ್ಲಿಸುತ್ತಿದೆ.
1907 ರ ಈ ದಿನ, ಭಗತ್ ಸಿಂಗ್ ಅವಿಭಜಿತ ಪಂಜಾಬ್ ಪ್ರಾಂತ್ಯದ ಲಿಯಾಲ್ಪುರ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಜನಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಅವರು ರಾಜ್ಗುರು ಮತ್ತು ಸುಖದೇವ್ ಅವರೊಂದಿಗೆ 23 ನೇ ವಯಸ್ಸಿನಲ್ಲಿ ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲ್ಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಣೆ ಮಾಡಿದ್ದಾರೆ.
ಭಾನುವಾರ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನ ಧೈರ್ಯ ಮತ್ತು ಶೌರ್ಯದ ಬಣ್ಣನೆ ಮಾಡಿದ್ದಾರೆ.
ಶಹೀದ್ ಭಗತ್ ಸಿಂಗ್ ಅವರ ಜೀವನದ ಸುಂದರವಾದ ಅಂಶವೆಂದರೆ, ಅವರು ಟೀಮ್ ವರ್ಕ್ಗೆ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು, ಅವರು ಲಾಲಾ ಲಜಪತ್ ರಾಯ್ ಅವರ ಬಗ್ಗೆ ಸಮರ್ಪಣೆ ಹೊಂದಿದ್ದರು, ಚಂದ್ರಶೇಖರ್ ಆಜಾದ್, ಸುಖದೇವ್ ಮತ್ತು ರಾಜ್ಗುರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರೊಂದಿಗಿನ ಅವರ ಬಾಂಧವ್ಯ ಶ್ರೇಷ್ಠವಾದುದು ಎಂದಿದ್ದಾರೆ.
ಇಂದು ಟ್ವಿಟ್ ಮಾಡಿರುವ ಮೋದಿ, ತಾಯಿ ಭಾರತಿಯ ವೀರ ಪುತ್ರ ಅಮರ್ ಶಾಹೀದ್ ಭಗತ್ ಸಿಂಗ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ. ಅವರ ಶೌರ್ಯ ಮತ್ತು ಶೌರ್ಯದ ಕಥೆಯು ದೇಶವಾಸಿಗಳಿಗೆ ಯುಗಯುಗದಿಂದ ಸ್ಫೂರ್ತಿ ನೀಡುತ್ತಲೇ ಬಂದಿದೆ ಎಂದಿದ್ದಾರೆ. ಭಗತ್ ಸಿಂಗ್ ಬಗೆಗಿನ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
मां भारती के वीर सपूत अमर शहीद भगत सिंह की जयंती पर उन्हें कोटि-कोटि नमन। वीरता और पराक्रम की उनकी गाथा देशवासियों को युगों-युगों तक प्रेरित करती रहेगी। pic.twitter.com/LMy2Mlpkol
— Narendra Modi (@narendramodi) September 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.