ನವದೆಹಲಿ: ವಿಶ್ವ ಸಂಸ್ಥೆಯ ಸ್ಥಾಪಕ ದೇಶಗಳಲ್ಲಿ ಒಂದು ಎಂಬ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಇಂದು ನಾನು ಈ ಐತಿಹಾಸಿಕ ಸಂದರ್ಭದಲ್ಲಿ ಭಾರತದ 130 ಕೋಟಿ ಜನರ ಭಾವನೆಗಳನ್ನು ಜಾಗತಿಕ ವೇದಿಕೆಯಲ್ಲಿ ಹಂಚಿಕೊಳ್ಳಲು ಆಗಮಿಸಿದ್ದೇನೆ. ಯಾವ ಸಂಸ್ಥೆಯ ರಚನೆಯು ಅಂದಿನ ಪರಿಸ್ಥಿತಿಗಳಿಂದಾಗಿತೋ, ಅದು ಇಂದು ಕೂಡ ಪ್ರಸ್ತುತವಾಗಿದೆಯೇ ಎಂಬ ಬಹಳ ದೊಡ್ಡ ಪ್ರಶ್ನೆ ಇಂದು ಇಡೀ ವಿಶ್ವ ಸಮುದಾಯದ ಮುಂದೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಒಂದು ವೇಳೆ ನಾವು ಕಳೆದ 75 ವರ್ಷಗಳ ವಿಶ್ವಸಂಸ್ಥೆಯ ಸಾಧನೆಗಳನ್ನು ಮೌಲ್ಯಮಾಪನ ಮಾಡಿದರೆ, ಆಗ ನಮಗೆ ಸಾಧನೆಗಳು ಗೋಚರಿಸುತ್ತವೆ. ವಿಶ್ವಸಂಸ್ಥೆಯ ಎದುರು ಗಂಭೀರ ಆತ್ಮಾಭಿಮಾನದ ಅವಶ್ಯಕತೆಯನ್ನು ತಂದೊಡ್ಡಬಲ್ಲಂತಹ ಹಲವಾರು ಉದಾಹರಣೆಗಳೂ ಇವೆ. ಹೇಳಿಕೊಳ್ಳಲು ಮೂರನೇ ವಿಶ್ವಯುದ್ಧ ನಡೆಯಲಿಲ್ಲ, ಆದರೆ ಅನೇಕ ಯುದ್ಧಗಳು, ಅಂತರಿಕ ಯುದ್ಧಗಳು ನಡೆದಿವೆ ಎಂಬುದನ್ನು ನಾವು ನಿರಾಕರಿಸುವಂತಿಲ್ಲ. ಎಷ್ಟೋ ಭಯೋತ್ಪಾದಕ ದಾಳಿಗಳಲ್ಲಿ ರಕ್ತದ ನದಿಯೇ ಹರಿದಿದೆ. ಈ ಯುದ್ಧದಲ್ಲಿ, ಈ ದಾಳಿಗಳಲ್ಲಿ ಹತ್ಯೆಯಾದವರು ನಮ್ಮ-ನಿಮ್ಮಂತೆ ಮನುಷ್ಯರೇ ಆಗಿದ್ದಾರೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಪ್ರತಿಕ್ರಿಯೆಗಳಲ್ಲಿನ ಬದಲಾವಣೆಗಳು, ವ್ಯವಸ್ಥೆಗಳಲ್ಲಿನ ಬದಲಾವಣೆಗಳು, ನೋಟದಲ್ಲಿನ ಬದಲಾವಣೆಗಳು ಇಂದಿನ ಸಮಯದ ಅವಶ್ಯಕತೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆಯ ಸುಧಾರಣೆಗಾಗಿ ನಡೆಯುತ್ತಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಭಾರತದ ಜನರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಈ ಪ್ರಕ್ರಿಯೆಯು ಎಂದಾದರೂ ತಾರ್ಕಿಕ ಅಂತ್ಯವನ್ನು ತಲುಪುತ್ತದೆಯೇ ಎಂದು ಭಾರತದ ಜನರು ಚಿಂತಿತರಾಗಿದ್ದಾರೆ. ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯದವರೆಗೆ ಪ್ರತ್ಯೇಕವಾಗಿಡಲಾಗುವುದು ಎಂದು ಮೋದಿ ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.