ನವದೆಹಲಿ: ಕೊರೋನಾ ಸೋಂಕು ನಿಯಂತ್ರಣ ಚಿಕಿತ್ಸೆಯಲ್ಲಿ ಆಡುಸೋಗೆ (ವಾಸಾ) ಮತ್ತು ಅಮೃತಬಳ್ಳಿ (ಗುಡುಚಿ) ಗಿಡಮೂಲಿಕೆಗಳ ಪಾತ್ರವನ್ನು ನಿರ್ಣಯಿಸಬಲ್ಲ ವೈದ್ಯಕೀಯ ಅಧ್ಯಯನವನ್ನು ನಡೆಸಲು ಕೇಂದ್ರ ಆಯುಷ್ ಸಚಿವಾಲಯ ಅನುಮೋದನೆ ನೀಡಿದೆ.
ಈ ಪರೀಕ್ಷೆಯನ್ನು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ, ಸೆಂಟರ್ ಫಾರ್ ಸೈಂಟಿಫಿಕ್ನ ವಿಭಾಗಗಳಾದ ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ ಸಹಯೋಗದೊಂದಿಗೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದು ರ್ಯಾಂಡಮೈಸ್ಡ್ ಓಪನ್ ಲೇಬಲ್ ತ್ರೀ ಆರ್ಮ್ಡ್ ಅಧ್ಯಯನವಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ಕೊರೋನಾ ನಿಯಂತ್ರಣಕ್ಕೆ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಸಂಭವನೀಯ ಪರಿಹಾರ ಕ್ರಮಗಳ ಬಗ್ಗೆ ಸಚಿವಾಲಯ ವ್ಯವಸ್ಥಿತ ಅಧ್ಯಯನ ನಡೆಸುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಪ್ರಯತ್ನ ಭಾಗವಾಗಿ ವಾಸಾ, ಗುಡುಚಿ ಗಿಡಮೂಲಿಕೆಗಳ ಪರೀಕ್ಷೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಪ್ರಯೋಗದ ಫಲಿತಾಂಶ, ಕ್ಲಿನಿಕಲ್ ಮತ್ತು ಲ್ಯಾಬೊರೇಟರಿ ಪಾರಾಮೀಟರ್ಗಳು, ರಿಸರ್ಚ್ ಲಾಜಿಸ್ಟಿಕ್ಗಳು ಮೊದಲಾದವುಗಳನ್ನು ಒಳಗೊಂಡಂತೆ ವಿವರವಾದ ಪ್ರಸ್ತಾಪವನ್ನು ಈ ಕುರಿತಂತೆ ಸಿದ್ಧಪಡಿಸಲಾಗಿದೆ. ಯುನಿಕ್ ಕೇಸ್ ರಿಪೋರ್ಟ್ ಫೋರಂ ಅನ್ನು ಬಳಸಿ ಈ ಅಧ್ಯಯನ ನಡೆಸಲಾಗುವುದು ಎಂದು ಸಚಿವಾಲಯ ಹೇಳಿಕೆ ನೀಡಿದೆ. ಈ ಎಲ್ಲಾ ಅಧ್ಯನಾಂಶಗಳನ್ನು ವಿವಿಧ ತಜ್ಞರು ಪರಿಶೀಲನೆ ಮಾಡಿದ್ದು, ಅವರೆಲ್ಲರ ಸಲಹೆ ಸೂಚನೆಗಳಂತೆಯೇ ಈ ಅಧ್ಯಯನ ನಡೆಯಲಿದೆ ಎಂದು ಸಚಿವಾಲಯ ಹೇಳಿದೆ.
ಕೊರೋನಾ ಸೋಂಕಿತರ ಮೇಲೆ ವಾಸಾ, ಗುಡುಚಿ ಗಿಡಮೂಲಿಕೆಗಳು ಬೀರುವ ಪರಿಣಾಮ, ಅವುಗಳ ಸಾರ, ಅವುಗಳು ಸೋಂಕು ವೈರಸ್ ಮತ್ತೆ ಆಕ್ರಮಿಸದಂತೆ ಎಷ್ಟರ ಮಟ್ಟಿಗೆ ತಡೆಯೊಡ್ಡಲು ಶಕ್ತವಾಗಿದೆ ಎಂಬುದರ ಕುರಿತೂ ಪ್ರಯೋಗ ಪರೀಕ್ಷೆ ನಡೆಸಲಾಗುವುದು. ಈ ಔಷಧೀಯ ಗುಣಗಳುಳ್ಳ ಮೂಲಿಕೆಗಳನ್ನು ಈಗಾಗಲೇ ಬೇರೆ ಬೇರೆ ಖಾಯಿಲೆಗಳ ಚಿಕಿತ್ಸೆಗೂ ಬಳಕೆ ಮಾಡಲಾಗುತ್ತಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.