ಮೈಸೂರು: ಇನ್ನೇನು ಕೆಲವೇ ಸಮಯದಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಆಚರಣೆಗೆ ಅರಮನೆ ನಗರಿ ಮೈಸೂರು ಸಿದ್ಧವಾಗುತ್ತಿದೆ. ಎಲ್ಲೆಲ್ಲೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲು ಬೇಕಾದ ಎಲ್ಲಾ ಕೆಲಸಗಳೂ ಭರದಿಂದ ಸಾಗುತ್ತಿವೆ. ಈ ಬಾರಿಯ ದಸರಾ ಹಬ್ಬದಲ್ಲಿಯೂ ಆತ್ಮ ನಿರ್ಭರ ಭಾರತದ ಹಿನ್ನೆಲೆಯಲ್ಲಿ ಬೆಳಕಿನಲಂಕಾರಕ್ಕೆ ಚೀನಾ ಮೇಡ್ ಬಲ್ಬ್ಗಳ ಬಳಕೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಲಡಾಖ್ ಗಡಿಯಲ್ಲಿ ಭಾರತದ ವಿರುದ್ಧ ವಿನಾ ಕಾರಣ ಕಾಲು ಕೆರೆದುಕೊಂಡು ಜಗಳ ಕಾಯುತ್ತಿರುವ ಚೀನಾದ ವಿರುದ್ಧ ಕೇಂದ್ರ ಸಮರ ಸಾರಿದ್ದು, ಚೀನಾ ವಸ್ತುಗಳ ಬದಲಾಗಿ ದೇಶೀಯ ಉತ್ಪನ್ನಗಳ ಬಳಕೆಗೆ ಉತ್ತೇಜಿಸಿದೆ. ಜೊತೆಗೆ ಚೀನಾದ ಅನೇಕ ಆಪ್ಗಳನ್ನು ಭಾರತದಿಂದ ಕಿಕೌಟ್ ಮಾಡಿದೆ. ಹಾಗೆಯೇ ಕೊರೋನಾ ಸಂಕಷ್ಟದ ಅವಧಿಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಆತ್ಮನಿರ್ಭರದ ಕನಸಿನ ಜೊತೆಗೆ ದಸರಾ ಹಬ್ಬವನ್ನು ಸಹ ಆಚರಣೆ ಮಾಡುವ ನಿಟ್ಟಿನಲ್ಲಿ ಚೀನಾ ಬಲ್ಬ್ಗಳ ಬಳಕೆಗೆ ನಿಷೇಧ ಹೇರಲಾಗಿದೆ.
ದಸರಾ ಅವಧಿಯಲ್ಲಿ ಮೈಸೂರಿನ 60 ರಿಂದ 75 ಕಿಮೀಗಳಷ್ಟು ರಸ್ತೆ ವಿದ್ಯುದೀಪಗಳಿಂದ ಕಂಗೊಳಿಸುತ್ತದೆ. ಕಳೆದ ವರ್ಷದ ವರೆಗೂ ಇದರಲ್ಲಿ ಚೀನಾ ಬಲ್ಬ್ಗಳ ಬಳಕೆ ಇತ್ತು. ಆದರೆ ಈ ಬಾರಿ ಸ್ಥಳೀಯವಾಗಿ ಅಂದರೆ ದೇಶೀಯವಾಗಿ ತಯಾರಾದ ಬಲ್ಬ್ಗಳನ್ನೇ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.