ನವದೆಹಲಿ: ರಾಷ್ಟ್ರೀಯತಾವಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಬಳಕೆದಾರರು ಮಾಡುವ ಪೋಸ್ಟ್ ಗಳಿಗೆ ಫೇಸ್ಬುಕ್, ಟ್ವಿಟ್ಟರ್ಗಳು ಕತ್ತರಿ ಹಾಕುತ್ತಿವೆ ಎಂದು ಯುವ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ದುರ್ವರ್ತನೆ ತಡೆಗಟ್ಟಲು ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಅನೇಕ ವಿಶ್ವಾಸಾರ್ಹ ಆರೋಪಗಳು ಕೇಳಿ ಬಂದಿದೆ ಎಂದು ತೇಜಸ್ವಿ ಸರ್ಕಾರಕ್ಕೆ ತಿಳಿಸಿದ್ದಾರೆ. ಲೋಕಸಭೆಯ ಶೂನ್ಯ ವೇಳೆಯಲ್ಲಿ ಸಂಸದರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ.
ಇದು ಮಾನವನ ಮಾತನಾಡುವ ಸ್ವಾತಂತ್ರ್ಯಕ್ಕೆ ಕಾರಣವಿಲ್ಲದ ನಿರ್ಬಂಧವಾಗಿದೆ. ಇದು ಮಹತ್ವದ ಸಾಂವಿಧಾನಿಕ ಸವಾಲನ್ನು ಒಡ್ಡುತ್ತದೆ ಎಂದು ಅವರು ತಿಳಿಸಿದ್ದಾರೆ. ಐಟಿ ಕಾಯ್ದೆ 2020 ಅಡಿಯಲ್ಲಿ ಮಧ್ಯವರ್ತಿಗಳೆಂದು ಸಾಮಾಜಿಕ ಜಾಲತಾಣಗಳು ಹೇಳಿಕೊಳ್ಳುತ್ತಿವೆ. ಆದರೆ ಮಧ್ಯವರ್ತಿಗಳು ಬಳಕೆದಾರರ ಪೋಸ್ಟ್ಗಳ ಮೇಲೆ ಹಸ್ತಕ್ಷೇಪ ಮಾಡುವ ವಿಚಾರವನ್ನು ಒಳಗೊಂಡಿಲ್ಲ. ಬದಲಾಗಿ, ಡೇಟಾ ಸಂಗ್ರಹಣೆ, ಪರಿಷ್ಕರಣೆ, ರವಾನೆಗೆ ಮಾತ್ರ ಸೀಮಿತವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.