ನವದೆಹಲಿ: ನೇಪಾಳದ ಕಟ್ಮಂಡುವಿನಲ್ಲಿ ಚೀನಾ ರಾಯಭಾರ ಕಚೇರಿಯ ಹೊರಗಡೆ ಏಕಾಏಕಿ ಪ್ರತಿಭಟನೆಗಳು ಭುಗಿಲೆದ್ದಿದೆ. ನೇಪಾಳದ ಭೂಪ್ರದೇಶಗಳನ್ನು ಚೀನಾ ಅತಿಕ್ರಮಣ ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ.
ಯುವಕರು ಸೇರಿದಂತೆ ಅನೇಕರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಚೀನಾದ ಅತಿಕ್ರಮಣದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ತಕ್ಷಣವೇ ಚೀನಾ ನೇಪಾಳದ ಭೂ ಪ್ರದೇಶದಿಂದ ಹೊರಗೆ ಹೋಗಬೇಕು ಮತ್ತು ದ್ವಿಪಕ್ಷೀಯ ಗಡಿ ಒಪ್ಪಂದವನ್ನು ಗೌರವಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಚೀನಾ ತಕ್ಷಣವೇ ನೇಪಾಳದ ಪ್ರದೇಶದಿಂದ ಹೊರ ಹೋಗಬೇಕೆಂದು ಯುವಕರು ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಹತ್ತು ತಿಂಗಳುಗಳಿಂದ ಮುಚ್ಚಿರುವ ನೇಪಾಳ ಮತ್ತು ಚೀನಾ ನಡುವಿನ ಎರಡು ಬಾರ್ಡರ್ ಪಾಯಿಂಟ್ಗಳನ್ನು ತೆರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಚೀನಾದ ಭದ್ರತಾಪಡೆಗಳು ಹಿಮಾಲಯ ರಾಷ್ಟ್ರ ನೇಪಾಳದ ಗಡಿ ಪ್ರದೇಶದಲ್ಲಿ 10 ನಿರ್ಮಾಣಗಳನ್ನು ರಚಿಸಿದೆ ಎಂದು ನೇಪಾಳಿ ಮೀಡಿಯಾಗಳು ವರದಿಯನ್ನು ಮಾಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ.
ಆದರೆ ಚೀನಾ ತನ್ನ ನಿರ್ಮಾಣಗಳು ತನ್ನ ಭೂಭಾಗದಲ್ಲಿದೆ ಎಂದು ಸಮರ್ಥಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.